ಶುಕ್ರವಾರ, ಜನವರಿ 5, 2024

ಸಂಭ್ರಮ (ಕವಿತೆ) - ಸುಭಾಷ್ ಸವಣೂರ.

ಬಾನಂಗಳ
ಕಂಗೊಳಿಸುವುದು,
ಮಿನುಗುವ
ನಕ್ಷತ್ರದಿಂದಲ್ಲ,
ಚದುರಿದ
ತಿಳಿ ಮೋಡದಿಂದಲ್ಲ,
ಕೇವಲ ಮಾತ್ರ
ಶಶಿಯ ಬೆಳಕಿಂದ….,
ಈ ಮನಸು
ಸಂಭ್ರಮಿಸುವುದು,
ಮಾನಿನಿಯ
ಮಾದಕತೆಯಿಂದಲ್ಲ,
ಹೆಂಗಳೆಯರ 
ಸಹವಾಸದಿಂದಲ್ಲ,
ಕೇವಲ ನಿನ್ನ
ಚೆಲುವಿನ ನೋಟದಿಂದ
ಗೆಳತಿ

- ಸುಭಾಷ್ ಸವಣೂರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...