ವಿಶ್ವದ ಪುಟದಲ್ಲಿ ಅಚ್ಚಳಿಯದೆ ಉಳಿದ
ರಾಮಕೃಷ್ಣ ಪರಮಹಂಸರ ಪ್ರೀತಿಯ ಶಿಷ್ಯನಾದ
ಸದ್ವಿಚಾರ ಬೆಳೆಸಿಕೊಂಡ ಭಾರತದ ಕಂದ
ಭಾರತದ ಕ್ರಾಂತಿಕಾರಿ ವಿವೇಕಾನಂದ
ಭಾರತದಲ್ಲಿರುವ ಆಧ್ಯಾತ್ಮದ ಅಗಾಧ ಸಂಪತ್ತು
ಪಾಶ್ಚಾತ್ಯರಿಗೆನು ಗೊತ್ತು ಅದರ ಕಿಮ್ಮತ್ತು
ಕನ್ಯಾಕುಮಾರಿ ಬಂಡೆ ಮೇಲೆ ತಪವಗೈದು ಕುಳಿತ
ತನ್ನ ಯೌವ್ವನವೇ ರಾಷ್ಟ್ರಪ್ರೇಮಕ್ಕೊಪಿಸಿ ನಿಂತ
ಸೂರ್ಯ ಕಾಂತಿಯಂತೆ ಹೊಳೆವ ನಮ್ಮಸಂತ ದಿಟ್ಟ
ದೇಶಪ್ರೇಮದ ಉದ್ಧಾರಕ್ಕೆ ಚಿಕಾಗೋಕೆ ಕಾಲಿಟ್ಟ
ಸರ್ವಧರ್ಮ ಸಮ್ಮೇಳನದಲ್ಲಿ ಸಂತಗೈದ ಭಾಷಣ
ಸಹೋದರ ಸಹೋದರಿಯರೆಂಬ ಪದತಂದ ಭೂಷಣ
ದೇವರೆಲ್ಲಿಹನು ಎಂದು ಹುಡುಕುತಿರುವ ಪ್ರಶ್ನೆಯಲ್ಲಿ
ಉತ್ತರ ಕಂಡನು ಪರಮಹಂಸರ ಸಾನಿಧ್ಯದಲ್ಲಿ
ದೇಹ ಚಿತ್ತ ಆತ್ಮಬಲದೊಂದಿಗೆ ಬೆಳೆದುನಿಂತನಲ್ಲ
ಗ್ರಹಣ ಶಕ್ತಿ ಸಮಯಪ್ರಜ್ಞೆ ಅವನಲ್ಲಿ ತುಂಬಿತಲ್ಲ
ಲೋಕದ ದೃಷ್ಟಿಯಲ್ಲಿ ಯುಗಪುರುಷನೆಂಬ ನಾಮ ಪಡೆದ
ಯೋಗಿಯಾಗುವ ಮೊದಲು ಉಪಯೋಗಿ ಆಗುಯೆಂದ
ನವಭಾರತ ಸ್ವಾತಂತ್ರ್ಯದ ಜನಕ ಸ್ವಾಮಿ ವಿವೇಕಾನಂದ
ನಿರ್ವಿಕಲ್ಪ ನಿಶ್ಚಿಂತ ಸಮಾಧಿಯಲ್ಲಿ ಲೀನನಾಗಿ ಹೋದ
- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ