ಗುರುವಾರ, ಫೆಬ್ರವರಿ 1, 2024

ಮೌನವಾಯಿತೆ ಮನಸು ನಿನ್ನಿಂದ(ಕವಿತೆ) - ಸುಭಾಷ್ ಸವಣೂರು.

ಮನದಾಳದ ಗರ್ಭದಲಿ
ನೊಂದ ನೆನಪುಗಳ ಚಿತ್ತಾರವು
ಸಣ್ಣ ಬೆಳಕಿಗೂ ಬಾರದೆ ಯಾರಿಗೂ ಕಾಣದೆ
ಅಡಗಿ ಕೂತಿದೆ ಯಾರಲು ಸೇರದೆ

ಕಡಲಾಳದಿಂದ ಉಕ್ಕಿ ಅಲೆಗಳಾಗಿ ಅಪ್ಪಳಿಸಿದಂತೆ
ನೊಂದು ಬೆಂದಾ ನೋವುಗಳು
ಮನದಾಳದಲ್ಲಿ ಕೊರಗಿ ಕೊರಗುತಲಿ
ಕಣ್ಣ ಹನಿಗಳಾಗಿ ಮೌನದಿ ಜಾರಿವೆ

ಸಾಗರದಂತಿದ್ದ ಪ್ರೀತಿಯೂ ಕೈ ಸರಿದು
ಮುಗಿಲೊಂದಿಗೆ ಮುಚ್ಚಿದಂತೆ
ಇದ್ದಕಿದ್ದಂತೆ ಕಂಡಾ ಸುಂದರ ನನಸು
ಕನಸಾಗಿ ಮಾಯವಾಗಿ  ಮನಸ್ಸು ಮೂಕವಾಗಿದೆ

ಮುಸ್ಸಂಜೆ ಸರಿದು ಇರುಳ ಬಯಸಿದಂತೆ
ತಡೆಯಲಾಗದ ಮನದ ಮಾತುಗಳು
ಹೃದಯ ಸೇರದೇ ಮೂಕವಾಗಿ
ಕತ್ತಲೆಯ ಆಸರೆ ಬಯಸಿ ಕಾರಾಳ ಇರುಳಲ್ಲಿ ನೆಲಸಿದೆ

ತುಂಬಿದ ನದಿಗಳು ಹರಿಯುವುದ
ತಡೆಯಲಾಗದಂತೆ
ಮನಸ್ಸಿನಲ್ಲಿ‌ ಚಿಗುರಿದಾ ಆಸೆಗಳೆಲ್ಲಾ
ಬಂದಿಸಲಾಗದೆ
ದುಖಃದ ಒಡಲಿನಲ್ಲಿ ಸೇರಿ ಕಂಬನಿಯಾಗಿ 
ಮೆಲ್ಲನೆ ಜಾರುವುದನ್ನು ತಡೆಯಲಾಗದಾಗಿದೆ

ಹೃದಯವು ಪ್ರೀತಿಯಾ ಸೇರದೆ ಮೌನವಾಗಿ ಮಿಡಿಯುತಾ
ಕಾಣದ ಪ್ರೀತಿಯೂ ಸಿಗಲಾರದೆ ವೇದನೆಯೂ ಹೆಚ್ಚಾಗಿ
ಮನಸ್ಸನು ತೊರೆದು ಮನಸಾರೆ ಹರಿಯುವುದೆ
ಕಾಣದ ಮಮತೆಯ ಪ್ರೀತಿಯ ಕಡಲ ಸೇರಲು.

- ಸುಭಾಷ್ ಸವಣೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...