ಗುರುವಾರ, ಫೆಬ್ರವರಿ 1, 2024

ಪ್ರಕೃತಿ (ಕವಿತೆ) - ಭಾಗ್ಯ ಎಸ್ ಅಡವಿ.

ಕೊಡಲಿಯ ಹಿಡಿದಾರ
ಕಡಿಲಿಕ ಬಂದಾರ್
ಕಷ್ಟದ ಸುದ್ದಿಯ
ಇಷ್ಟ ದಿ ಹೇಳಲೇ

ಸ್ವಾರ್ಥ ಕ್ಕ ಬಲಿಯಾದೆ
ಏನಕ್ಕ ಮಾಡಲಿ
ಮನುಷ್ಯನ ಮೊಸಕ್ಕ
ನನಾದೆ ಬರಡಕ್ಕ 

ಅತ್ತರು ಬಿಡಲಿಲ್ಲ
ಕರೆದರೂ ನೆಡ ಲಿಲ್ಲ
ಕಟ್ಟಿಗೆ ಕಡಿದಾರ
ಒಟ್ಟಾಗೀ ಒಯ್ಯದಾರ

ಹಚ್ಚಾಗ ಅತ್ತಾರ
ಕಡಿಯಾಗ ನಕ್ಕಾರ
ಹುಚ್ಚ ಮಂದಿಗೀ ನೋಡಿ
ಬೆಚ್ಚ ಬೆರಗ ಆಗೆನ.

- ಭಾಗ್ಯ ಎಸ್ ಅಡವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...