ಸೋಮವಾರ, ಮೇ 13, 2024

ಮತ್ತೆ, ತಿರಿಗಿ ಬರಲೇ ಇಲ್ಲ (ಕವಿತೆ) - ನಾಗು.

ದಿನದಿನವೂ ತೀವ್ರವಾಗುತ್ತಿರುವ ಬಯಕೆ..
ಬೆದೆಗೆ ಬಂದಿದೆ ದೇಹ,
ಮನಸ್ಸು, ಅತ್ಮ.
ನೂರಾರು ಕನಸು, ಸಾವಿರಾರು ಬಯಕೆ.
ಮಿಲನ, ಸಮ್ಮಿಲನಕ್ಕಾಗಿ ಹಾತೊರೆತ. 

ಬಾಯ್ ಪ್ರೆಂಡ್, ಗಂಡ, ಪಕ್ಕದ ಮನೆಯವನು.... ದೇಹ ಹೀರುವ ದುಂಬಿಗಳು. ಹಿಡಿದು, ಮುದ್ದಿಸಿ, ರಮಿಸಿ, ಸ್ಖಲಿಸಿ...
ಒರೆಸಿಕೊಂಡು ಎದ್ದು ಹೋಗಿ ಬಿಡುವವರೇ ಎಲ್ಲರೂ....

ದೇಹದ ಆಸೆ ತಣಿದರೂ... ಮನಸ್ಸು, ಆತ್ಮಗಳಿಗೆ ನಿತ್ಯ ಉಪವಾಸ.
ಯಾರಿಂದಲೂ ಇಲ್ಲ ತೃಪ್ತಿ.

ಕಾಯುತ್ತಲೇ ಇದ್ದೆ. 
ನನ್ನ ಮನವನ್ನು ಮುಟ್ಟಬಲ್ಲ, ಅತ್ಮವನ್ನು ತಣಿಸಬಲ್ಲ ಪುರುಷ ಸಿಂಹನಿಗಾಗಿ. 
ಕನಿಷ್ಟ, 
ಕೆಲಸ ಮುಗಿದ ಮೇಲೆ,
ಅಪ್ಪಿ, ಹಣೆಗೊಂದು ಮುತ್ತಿಟ್ಟು, ಮಾತಾಡಿ-ಮನಸ್ಸು ಮುಟ್ಟಬಲ್ಲವನಿಗಾಗಿ.

ಕೊನೆಗೂ ಒಬ್ಬ ಬಂದ. ಮನ್ಮಥ ರೂಪ. ದೇಹ, ಮನಸ್ಸನ್ನು ಮುಟ್ಟಿತ್ತು ಅವನ ಪ್ರೀತಿ, ಪ್ರತಾಪ!
ಅಪ್ಪಿ, ಮುತ್ತಿಟ್ಟು, ಹಣೆಸವರಿ, ಮತ್ತೆ ಬರುವೆ ಎಂದ. 
ಪ್ಯಾಂಟ್ ಏರಿಸಿ, ಜಿಪ್ ಎಳೆದು, ಕಣ್ ಹೊಡೆದು, ಆಸೆ ಚಿಗುರಿಸಿ ಹೋದ.

ಮತ್ತೆ ಬರುತ್ತಾನೆಂದು ಕಾದು ಕಾದು, ಕಾದು ಕನ್ಯೆಯಾಗಿಯೇ ಉಳಿದೆ..... 
ದೇಹ ಮುಟ್ಟಿದ ನೂರರಲ್ಲಿ... ಒಬ್ಬನೂ ಮುಟ್ಟಲಾಗಲಿಲ್ಲ ನನ್ನ  ಆತ್ಮವನ್ನು. 

ಮತ್ತೆ, ತಿರಿಗಿ ಬರಲೇ ಇಲ್ಲ.
ಮನಸ್ಸು
ಮುಟ್ಟುವ, ದಾಹ ತೀರಿಸುವ ಅಸೆ ಚಿಗುರಿಸಿದ ಅವನು.

- ನಾಗು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...