ಗುರುವಾರ, ಆಗಸ್ಟ್ 22, 2024

ಬದುಕಿನ ಮುಖಗಳು..

""ಬದುಕಿನ ಮುಖಗಳು""

 ಹುಟ್ಟು ಸಾವು ಬದುಕಿನೆರಡು ಮುಖಗಳು 
ಎಲ್ಲರೂ ದೇವನಾಡಿಸುವ ಪಾತ್ರಧಾರಿಗಳು 

ಬದುಕ ನಾಲ್ಕು ದಿನದ ಪಯಣದಲಿ
ನಸು ನಗುತ ಸಾಗೋಣ ಜೊತೆಯಲಿ

 ಸ್ವಾರ್ಥದ ಕೂಪದಲಿ ಬೇಯದಿರಲಿ ಮನ 
ದೇವನೊಲಿಯುವಂತೆ ಸಾಗಿಸೋಣ ಜೀವನ 

ಹುಟ್ಟಿನ ಖಚಿತದಷ್ಟೇ ಸಾವು ಅನಿವಾರ್ಯ
 ಮಾಡೋಣ ಮರಣದಾಚೆಗೂ ಹೆಸರುಳಿಯುವ ಕಾರ್ಯ

 ಬದುಕಪುಟದಲಿ ಜನನ ಮರಣಗಳು 
ದೇವ ಬರೆದ ಅಳಿಸಲಾಗದ ಅಕ್ಷರಗಳು

 ದಕ್ಕಿದಷ್ಟೇ ಆಸ್ವಾದಿಸೋಣ ಬಾಳ ಬುತ್ತಿಯನು 
ಜನನದಷ್ಟೇ ಸಾರ್ಥಕ್ಯಗೊಳಿಸೋಣ ಮರಣವನು
  ಮಧುಮಾಲತಿ ರುದ್ರೇಶ್ ಬೇಲೂರು ✍️✍️

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...