ಗುರುವಾರ, ಅಕ್ಟೋಬರ್ 31, 2024

ವಿಸ್ಮಯ...

ಬೆಳಕ ನಿರೀಕ್ಷೆಯಲ್ಲಿರುತ್ತೇನೆ
ಸೂರ್ಯ ಹುಟ್ಟುತ್ತಾನೆ

ಇನ್ನೇನು ಬೆಳಕು ಹರಿಯುವ ಹೊತ್ತಿಗೆ
ಹೃದಯ ಬಡಿದುಕೊಳ್ಳುತ್ತದೆ

ಹತ್ತಾರು ಗೊಂದಲ
ಮತ್ತೆಲ್ಲೊ ಕುತೂಹಲ
ಇನ್ನೆಲ್ಲೋ ಆತಂಕ

ಇಷ್ಟೆಲ್ಲಾ ಬೆಸೆದುಕೊಳ್ಳುತ್ತ
ಬಿಗಿಯಾಗುತ್ತೇನೆ

ಶಾಖಕ್ಕೆ ಮೈಯೊಡ್ಡಲೇಬೇಕಿದೆ
ಇಷ್ಟಿಷ್ಟೇ ಕಣ್ಣುಗಳ ಬಿಟ್ಟಾದರೂ
ಆಗಾಗ್ಗೆ ನೋಡಲೇಬೇಕಿದೆ

ಈ ತಟಸ್ಥ ಬದುಕು 
ಚಲಿಸುವ ಹೊತ್ತಿದು
ಒಮ್ಮೆಲೆ ಸತ್ತು ಬದುಕುವ
ಗಳಿಗೆಯದು

ಉಸಿರ ತೆಗೆದುಕೊಳ್ಳುತ್ತಾ
ಅಷ್ಟೆಲ್ಲಾ ಬೆಳಕಿಗೂ
ಹಬ್ಬಿಕೊಂಡೆ

ಜೀವರಾಶಿಗೆಲ್ಲ ಜೀವ ಬಂದಂತಾಯ್ತು
ಭೂಮಿ ಅರೆಕ್ಷಣ ನಿಂತುಹೋಗಿತ್ತು.... ಖುಶಿಗೆ!
  
ನೂರು ಪ್ರಶ್ನೆಗೆ
ಒಂದೇ ಉತ್ತರ ಸಿಗುವುದು ,ಅದೆಷ್ಟು ಅಪರೂಪ.....
ಎಂದು ಕಣ್ಣು ಮುಚ್ಚಿಕೊಂಡೆ....
ಅವನು ಬದುಕು ವಿಸ್ಮಯ ಅಂತಷ್ಟೇ ಹೇಳುತ್ತ ಮುಗುಳ್ನಕ್ಕ......
ಸಿರಿ❤️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...