ಶನಿವಾರ, ನವೆಂಬರ್ 2, 2024

ಎಚ್ಚೆತ್ತ ಭಾವನೆ...

ಎಚ್ಚೆತ್ತ ಭಾವನೆ ...


ಎಚ್ಚೆತ್ತ ಭಾವನೆ ಎತೆತ್ತ ಹೋಡ್ವುದೆ 
ನೂರಾರು ಭಾವಗಳ ನೂಕಿಯಾಚೆ 
ನಿನ್ನ ಸೇರುವ ಇಚ್ಛೆ, 
ಇಚ್ಛಾಶಕ್ತಿಯಾಗಬೇಕಿದೆ.

ಒಲುಮೆಯ ಆಶಿಸುವ 
ಎನ್ನಾಸೆಯ ಆಶಯದ ದೀಪಕೆ
ನಮ್ಮಿಬ್ಬರ ಪ್ರೀತಿಯ ಇಂಧನವ
ಹರಿಸು, 
ಹುರಿಯಲಿ ಜ್ವಜ್ವಾಲ್ಯಮಾನವಾಗಿ,
ಲೋಕವೇ ಬೆಳಗಲಿ ಪ್ರೀತಿಯ 
ನೆರಳಲಿ,
ನೂರು ಭಾವಗಳ ನೂಕಿ 
ಸೇರ ಬೇಕಿದೆ ನಮ್ಮ ಬಾಳ ನೌಕೆ.

ಕಲ್ಪದ ಮೇಲೆ ಹಾಲಿನ 
ಹೊಳೆಯರಿಸಿ ಬೆಳಗುತ್ತಿರುವನು
ಹುಣ್ಣಿಮೆಯ ಚಂದ್ರ,
ಚಂದನದ ಭಾನ ತುಂಬಾ
ನೂರು ಭಾವ ನೂಕಿ, ನೀನ್ನ ಸೇರಲು
ಪ್ರೀತಿ ಎಂಬೊಂದರ ಭಾವ
ಸಾಕೆ.

ತಂಪು ನೀಡುವ ವೃಕ್ಷಗಳ 
ಕಂಪು ಸೂಸುವ ಪುಷ್ಪಗಳ 
ಪೆಂಪ ನಾರು ಬಲ್ಲರೆ 
ಒಡಲೊಳಗಿನ ಹೊರಡದ
ಶಬ್ದಗಳು ಒಡಲೊಳಗೆ 
ನರಳುತ್ತಿದೆ.
ಭಾವಗಳ ನೂಕಿ 
ಭಾವಕ್ಕೂ ನೋವು.


ದೀಪಗಳು ಹಾರಿದ ಭಾವನೆಯ ಜಗತ್ತು
ಸಹನೆಯ ಕಳೆದುಕೊಂಡ ಆಪತ್ತು 
ಸಹಬಾಳ್ವೆಯ ಮಹತ್ತು 
ಇವುಗಳ ತಿಳಿಯದ ಜಗತ್ತಿಗೆ 
ದಾರಿ ದೀಪವೂ ಬೇಕಿದೆ 
ಧೀರ ಬಾಳ್ವೆಯ ನಮ್ಮ ಬದುಕಿಗೆ...
ಮಂಜುನಾಥ್ 
ಮಂಜಿಹಳ್ಳಿ 
9686225964

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...