ಶನಿವಾರ, ಆಗಸ್ಟ್ 23, 2025

ಸಂಘಗೀತ...

ಸಂಘಗೀತ
'ಬೆಳಕು ನಮ್ಮ ಭಾರತ'
ಹೊಳೆಯುವುದು ಶಾಶ್ವತ
ಸಂಘಶಕ್ತಿಯಲ್ಲಿ ನಾವು
ಸಾಗಿದರೆ ಸಂತತ

ಹಿಮಾಚಲದ ಬೆಳಗಿನಲ್ಲಿ
ಬಿಂದು ಬಿಂದು ಸಿಂಧುವಾಗಿ
ಎದೆಗಡಲ ಗಂಗೆಯಲ್ಲಿ
ಒಂದಾಗಿ ಸೇರುವ, ನಾವು ಒಂದಾಗಿ ಸೇರುವ

ಪದ ಪದವ ಪೋಣಿಸಿ,
ವೀರಗಾನ ಮೊಳಗಿಸಿ
ಸರಸ್ವತಿಯಲೀ ಮಿಂದು,
ಅರುಣಾಚಲದಿ ನಿಂದು
ಕ್ಷಾತ್ರರುಧಿರ ಹಾರವಾಗು
ಭಾರತಾಂಬೆ ಕೊರಳಿಗೆ, ಭಾರತಾಂಬೆ ಕೊರಳಿಗೆ

ಅಂದು ಇಂದು ಎಂದೆಂದೂ
ನಮ್ಮ ಬಲವೆ ಹಿಂದುವೆಂದು
ನೊಸಲಿಗಿಟ್ಟ ಕೇಸರಿಯು
ಮಣ್ಣಕಣದ ಬಂಧವೆಂದು
ಸಂಘದೀಕ್ಷೆ ತೊಡುವೆವಿಂದು
ಅಖಂಡವೂ ನಾವೆಂದು! ಅಖಂಡವೂ ನಾವೆಂದು!!
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...