ಶನಿವಾರ, ಆಗಸ್ಟ್ 23, 2025

ಪಯಣ...

ಪಯಣ

ದೂರ ಹೋಗಬೇಕು ನಾನು
ನಾನೆ ನನ್ನ ಸನಿಹವಿಲ್ಲ
ಜಗದ ಗೊಡವೆ ತೊರೆದು
ಸಾಗಬೇಕು ನಿಲ್ಲದೆ!

'ಇದ್ದು ಹೋಗು, ಬಂದು ಸೇರು'
ಸೋತಿದೆ ತೆರೆಯ ಬಾಳು
ಕಳೆಯಬೇಕು ಹೊಳೆಯಬೇಕು
ರಂಗ ತೊರೆದ ಮೇಲೇ ಬದುಕು!

ನಿಂತು ನಿಂತೇ ಕೊಳೆವೆಯೇಕೆ
ಪಂಕ ತುಂಬಿ ಹೂಳಿದೆ
ಹರಿದು ಹರಿದು ಅಬ್ಬಿಯಾಗು
ಸಾಗಿದಂತೆ ಬಾಳಿದೆ!

ಪದ ಪದವ ನೀವಿದಂತೆ
ಅಂತರಾಳ ಚಂದನ
ಅಂದು ಬುದ್ಧ ಇಂದು ನಾನೆ
ನಾಳೆ ನಿಮದೆ ಗಾಯನ!
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...