ಬುಧವಾರ, ಆಗಸ್ಟ್ 13, 2025

ನಿವೇದನಾ..

ನಿವೇದನಾ

ಕೈಮುಗಿಯುತ ದೇವರೇ ತಾವಾದಿರಿ
ಘಂಟೆಯಿಲ್ಲ ಜಾಗಟೆಯಿಲ್ಲ
ಧೂಪದಾರತಿ ಅಭಿಷೇಕಗಳಿಲ್ಲ
ದೇವನ ಕಾಣಿಸಿದ ಪ್ರಣತಿ ನೀವು
ಕಂಡನೆ ದೇವ ಕಾಣುವೆನೆ ನಾs

ಕೊರಳ ನೀಡುತ ಹೂವೆ ತಾವಾದಿರಿ
ಕಾಡಲ್ಲ ತೋಟವಲ್ಲ ತಾವಿಲ್ಲ
ಬೇರಿಲ್ಲ, ರೆಂಬೆಕೊಂಬೆ ಕಿರೀಟಗಳಿಲ್ಲ
ಶ್ರೀಗಂಧ ಪರಿಮಳ ತುಂಬಿ ತಾವು
ಕಂಡಿತೆ ಹೂ ಮುಡಿವೆನೆ ನಾs

ಬೊಗಸೆಯೊಡ್ಡುತ ನೀರೇ ತಾವಾದಿರಿ
ಬಾವಿಯಲ್ಲ ಸರೋವರವಲ್ಲ
ರತ್ನಗರ್ಭದಿಂದೆದ್ದ ಆವಿಯೂ ಅಲ್ಲ
ದಾಹ ತಣಿಸುವ ಅಮೃತವು
ಕಂಡಿತೆ ಜಲ ಕುಡಿವೆನೆ ನಾs

ನೀನೆನ್ನುತ ನಾನಾಗಿಯೇ ನಿಂತಿರಿ
ದೇಹವಲ್ಲ ಭೂತಭ್ರಾಂತಿಯಲ್ಲ
ನಾನಾನೆನ್ನುವ ಜಗವೂ ಅಲ್ಲ
ಕಣಕಣದಲೂ ಆತ್ಮವೆ ದೇವ
ಕಂಡಿತೆ ಜೀವ ಒಂದಾಗುವೆನೆ ನಾs
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...