ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿಗೆ ಬಿಎಮ್ ಟಿಸಿ. ಡ್ರೈವರ್ ರವೀಶ್ ರವರು ಆಯ್ಕೆ
ಚಿಕ್ಕಮಗಳೂರು: ಜಿಲ್ಲೆಯ ಕಡೂರ್ ತಾಲೂಕ್ ನಿಡುವಳ್ಳಿ ಗ್ರಾಮದವರಾದ ರವೀಶ್ ರವರು ತಮ್ಮ ಚಾಲಕ ಕೆಲಸದ ಜೊತೆಗೆ ತೆಂಗಿನಕಾಯಿ ಮೂಲಕ ಗಣೇಶ, ಮಂಕಿ, ಮೊಲ, ಗಂಡುಬೇರುಂಡ,
ಇನ್ನೂ ಅನೇಕ ಕಲಾಕೃತಿಗಳನ್ನು ತಮ್ಮ ಕೈಚಳಕದಿಂದ ಬಿಡಿಸುವ ಮೂಲಕ ಒಬ್ಬ ಅಪರೂಪದ ಜಾಣ್ಮೆ ಕಲಾವಿದ ಇವರ ಕಲೆಗೆ ಹಾಗೂ ಕ್ರಿಯಾಶೀಲತೆಯನ್ನು ಗುರುತಿಸಿ ತುಮಕೂರಿನಲ್ಲಿ ನಡೆಯುತ್ತಿರುವ ಪ್ರಥಮ ರಾಜ್ಯ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆಂದು
ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯಘಟಕದ ಸಂಸ್ಥೆಯ ಅಧ್ಯಕ್ಷರಾದ ಹುಲಿದುರ್ಗ ಲಕ್ಷ್ಮೀನಾರಾಯಣ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ಅಭಿನಂದನೆಗಳು 💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ