ಭಾನುವಾರ, ಆಗಸ್ಟ್ 22, 2021

ಸೂರ್ಯೋದಯ (ಕವಿತೆ) - ಕು. ನಿತ್ಯಶ್ರೀ ಆರ್ ಶಿವಮೊಗ್ಗ.

 ಸೂರ್ಯೋದಯ
(ಚಿತ್ರ ಕೃಪೆ ಅಂತರ್ಜಾಲ : unsplash.com)

ಉದಯಿಸುತಿಹನು ನೇಸರ
ಮುಂಜಾನೆಯಲಿ
ಮುಗುಳ್ನಗುತಿಹನು ಈತ
ಬಾನಿನಲಿ
ಕೆಂಪಾದ ಮೋಡದ ತಿಳಿ
ಆಗಸದಲಿ
ತಂಪಾದ ತಂಗಾಳಿ ಪ್ರಕೃತಿಯ
ರಮ್ಯತೆಯಲಿ

ನಿಸರ್ಗದ ಸುಂದರ
ವಾತಾವರಣದಲಿ
ಸುಯ್ಯೆಂದು ಗಾಳಿ
ಬೀಸುವ ಸಮಯದಲಿ
ತೆಂಗಿನ  ಗರಿಗಳ
ಸದ್ದಿನ ಜೊತೆಯಲಿ
ಶಾಂತವಾಗಿ ಮಿನುಗುವ
 ಸಮುದ್ರದ ಬಳಿಯಲಿ

ಒಂದರಮೇಲೊಂದು ಬರುವ
ಅಲೆಗಳ ಸಪ್ಪಳ ಕೇಳುತಲಿ
ಭಾಸ್ಕರನ ಪ್ರತಿಬಿಂಬವೇ
ಸಾಗರಿಯ ಕಡಲ ಒಡಲಿನಲಿ
ಒಮ್ಮೊಮ್ಮೆ ಮೋಡಗಳ
ಮರೆಯಲಿ
ಮುಂಜಾವು ಬೆಳಕಿನ ಸೊಬಗಲಿ...

- ಕು. ನಿತ್ಯಶ್ರೀ ಆರ್ ಶಿವಮೊಗ್ಗ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...