ಶನಿವಾರ, ಸೆಪ್ಟೆಂಬರ್ 18, 2021

ಗಣನಾಯಕ (ಕವಿತೆ) - ಆಶಾ.ಎಲ್.ಎಸ್. ಶಿವಮೊಗ್ಗ.

 ಗಣನಾಯಕ

ಪಾರ್ವತಿಯ ಮುದ್ದು ಕಂದ 
ಭಕ್ತರನುದ್ಧರಿಸಲು ಭೂಮಿಗೆ ಬಂದ
ಶಿವನ ಪ್ರೀತಿಪಾತ್ರನೀತನು
ಈತನನುಜನು ಷಣ್ಮುಖನು

ಮೊದಲು ನಿನ್ನ ಪೂಜಿಸೇ
ಕಾರ್ಯಗಳೆಲ್ಲ ಪಡೆವುದು ವಿಜಯ
ನಿನ್ನ ನಾಮ ಪಠಿಸಿದವಗೆ
ಇಲ್ಲ ಯಾವುದೇ ವಿಘ್ನವೂ

ಸಿದ್ಧಿಬುದ್ಧಿಗಳಿಗೆ ಅಧಿಪತಿಯು
ಜ್ಞಾನಮಯ ನೀನೇ ಚಿನ್ಮಯ
ಪಾಶಾಂಕುಶಧಾರಿ ವಿಘ್ನರಾಜನೇ
ಇಲಿಯನೇರಿ ಮೆರೆವ ಶಕ್ತಿರೂಪನೇ

ಮಂಗಲ ಚರಣ ಸಂಕಟ ಹರಣನೇ
 ಶಕ್ತಿ ಸಹಿತನೇ ಭಕ್ತರ ಪೊರೆವವನೇ
ಮೋದಕವನು ನೀಡುವೆನು ಬಾರೋಬಾ
ಮುತ್ತಿರುವ ಕತ್ತಲನ್ನು ದೂರಮಾಡು ಬಾಬಾ

ಜಗವ್ಯಾಪಿಸಿರುವೇ ವಿಶ್ವವಂದ್ಯನೇ
ಪರಬ್ರಹ್ಮರೂಪ ಸ್ವರೂಪ ಗಣೇಶನೇ
ನಿನಗಿದೋ ಮಾಡುವೆವು ವಂದನೇ
ಎಲ್ಲರನೂ ಪೊರೆಯೋ ಗಣನಾಯಕನೇ
✍️ ಆಶಾ.ಎಲ್.ಎಸ್. ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...