ಬುಧವಾರ, ಸೆಪ್ಟೆಂಬರ್ 1, 2021

ರಾಧೇಕೃಷ್ಣೆಯು (ಕವಿತೆ) - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ.

ರಾಧೇಕೃಷ್ಣೆಯು
ದೇವಕಿ ಕಂದ ವಸುದೇವ ನಂದನ 
ಮುರುಲಿ ನಾದಕೆ ಪ್ರೇಮಬಂಧನ,,
ಮುಕುಟದಲಿ ಅಂದದ ಗರಿಯು 
ಕಂಠದಿ ಮುತ್ತಿನ ಚೆಂದದ ಮಣಿಯು,,//೧// 

ಭವ್ಯ ಬುವಿಗೆ ಸಗ್ಧ ಜ್ಞಾನಮಯಿ
ಭೂ ಲೋಕದ ಶಾಂತ ಪ್ರೇಮಮಯಿ,,
ಹಳದಿ ಪೀತಾಂಬರ ತೊಟ್ಟ
ಯದುವಂಶ ತಿಲಕ ರಮ್ಯಮಯಿ,,//೨//

ರಾಧೆಯ ಕರಪಿಡಿದು ತೋರಿದೆ
ಹೃದಯದ ತುಂಬ ಅರ್ತಿಯ,,
ಹುಣ್ಣಿಮೆಯ ಚೆಂದದ ಕಾಂತಿಯ
ಏಕಾಂತದಲಿ ಮರೆತೆಯ ಮಯೂರಿಯ,,//೩//

ಸೊಬಗ ಬನದಲಿ ವೇಣು ನಾದದಲಿ
ನಳಿಸುತಿದೆ ಸಸ್ಯಶ್ಯಾಮಲೆಯು,,
ಯಮುನಾ ತೀರದಿ ಜೋಡಿ ಸುಮವು
ಜಗಕೆ ತೋರಿದೆ ನಾದವ  ರಾಧೆಕೃಷ್ಣೆಯು,,//೪//
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಡ್ವೈಸರ್ ಅಂಚೆ ಜೀವ ವಿಮೆ ಮಂಡ್ಯ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...