ಶನಿವಾರ, ಡಿಸೆಂಬರ್ 11, 2021

ಆ ಪಕ್ಷ- ಈ ಪಕ್ಷ (ಕವಿತೆ) - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಮಂಡ್ಯ.

ಬಾಯಿಯಲ್ಲಿ ಬೆಣ್ಣೆ ಕಂಕುಳಲ್ಲಿ ದೊಣ್ಣೆ‌
ಹಿಡಿದು ನಡೆದವನೆ ನೋಡಿರಾಣ್ಣ ..
ಎದ್ದಾಗ ಒಂದು ಪಕ್ಷ ಮಲಗುವಾಗ ವೊಂದು ಪಕ್ಷ
ಜಿಂಕೆಯಂತೆ ಜಿಗಿತಾನೆ ನೀವೇ ನೋಡಿರಣ್ಣ..//೧//

ನುಡಿಯಲ್ಲಿ ಜೋರು ಗತ್ತು ಗಮ್ಮತ್ತು
ಕಾಯದೊಳಗೆಲ್ಲ ತುಂಬಿದೆ ಜೊಳ್ಳಣ್ಣ ..
ಆದರೇನು ನಿನಗೆ ಸಾಟಿ ಯಾರಣ್ಣ
ಈ ಬುವಿಯ ಜನಕೆ ನೀನೇ ಉದಾತ್ತವಣ್ಣ ..//೨//

ಕಾರುಣ್ಯ ತುಂಬಿದ ನೀತಿಗೆ ಬಹಳ ದೂರ
ಜಾತಿ ಧರ್ಮವ ಬಿಡೋದಿಲ್ಲಣ್ಣ..
ಆದರುನು ನೀನೇ ನಮ್ಮ ರವಿಯಣ್ಣ
ನಮ್ಮನಾಳುವ ಪ್ರಾಮಾಣಿಕ ದೊರೆಯಣ್ಣ..//೩//

ದುಡ್ಡOದ್ರೇ ನಿನ್ನ ಜೀವ ಅಧಿಕಾರ ನಿನ್ನ ಭಾವ
ಅಸತ್ಯನೆ  ನಿನ್ನ  ದೈವವಣ್ಣ..
ಆದರೇನು,ನೀನೇ ನಮ್ಮನಾಳುವ ಏಳು ಸುತ್ತಿಗೆ*
ಸವಿಗಾರ ಜನನಾಯಕ ಪ್ರೇರಕವಣ್ಣ..//೪//

ಬಡವರ ಕಂಡರೆ ಒಳಒಳಗೆಯಾಗಲ್ಲ
ಹುಸಿ ನಗುವುದ ಬಿಡೋದಿಲ್ಲಣ್ಣ..
ಕುಣಿತ್ಯತೆ ಜೇಬು ತುಂಬ ಪುಡಿಗಾಸು
ಜನಮನದ ಮತವೆಲ್ಲ ನಿನ್ನದೆ ಅದ್ಹೇಗಣ್ಣ..//೫//

ಅಬ್ಬಾ, ಏನು ಮೋಡಿ ಮಾಡದ್ದಣ್ಣ
ಎಷ್ಟು ಗುಡಿ ಮನಗಳ ಕದ್ದಣ್ಣ..
ನಿನ್ನ ಬಿಡಲ್ಲಾಂತರಲ್ಲ ಅದರ ಗುಟ್ಟೇನು
ಅಂತದ್ದು ಏನು ಮಾಡದೇ ಹೇಳಾಣ್ಣ..//೬//
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...