ಮಂಗಳವಾರ, ಡಿಸೆಂಬರ್ 14, 2021

ನೀನು ಇದ್ದೇನು (ಕವಿತೆ) - ಲಕ್ಷ್ಮೀನಾರಾಯಣ ಕೆ, ವಾಣಿಗರಹಳ್ಳಿ.

ಯಾರ ನೆನಪಿಗೂ ಗುರುತು ಬಾರದೆ
ನೀನು ಇದ್ದೇನು…?
ಇದ್ದೆನೆಂಬುವ ನೆನಪು ಮಾತ್ರವೆ
ಇರುವಿಕೆಯ ಜೀವಂತ ಸತ್ಯ

ಅನಿಶ್ಚಿತತೆಯ ಬರುವಿನ ಸಾಕ್ಷಿ ನಾವು
ತೊಟ್ಟಿಲು ತೂಗಿದಾಗ ಕಿಲಕಿಲವಾಗಿ
ದಾಪುಗಾಲ ಕಲರವ ಮನೆಯ ತುಂಬಿ
ಪುಟಿದೇಳುವ ಬಾಲ್ಯಕಳೆದು ಸಾಗಿದೆ
ಗಟ್ಟಿ ಕಾಯ ಗಂಟಿನೊಳಗೆ ಸಿಕ್ಕಿ
ಅದಕೂ ಇದಕೂ ಜೋತು ಬಿದ್ದು 
ಸಡಗರ ಸಂಭ್ರಮದ ಭ್ರಮೆಯ ಹಬ್ಬ
ಇಲ್ಲವಾಗುವ ಒಂದು ದಿನಕ್ಕೆ 
ಸಾವಿರ ಸೆಣಸಾಟವೇಕೆ…?
ಶೂನ್ಯಕ್ಕೆ ಮಿಡಿಯುವುದು ತಪ್ಪಿಲ್ಲ
ಇನ್ನಿಷ್ಟೇ ಎಲ್ಲಾ… ನೀನು ಇದ್ದೇನು…?

ನಿನ್ನ ಕಾಯ ಇಲ್ಲವಾದರೂ… 
ಹೊಸ ಹುಟ್ಟಿನಂತೆ ಹುಟ್ಟುತ್ತಲಿರು
ನಿನಗಾಗಿ ಹತ್ತಾರು ಕಣ್ಣೀರುಗಳು ಸುರಿಸುವಂತೆ
ಮರುಕಗಳು ನಿನ್ನ ನೆನೆದು ಮೈದಾಳಲಿ ವಿಶ್ವವಿಡಿ
ಯಾರ ನೆನಪಿಗೂ ಬಾರದ ಹಾಗೆ
ನೆನೆಯದಿರೆ ಯಾರೂ… ನೀನು ಇದ್ದೇನು…?
         ‌‌         
       - ಲಕ್ಷ್ಮೀನಾರಾಯಣ ಕೆ, ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

6 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...