ಶುಕ್ರವಾರ, ನವೆಂಬರ್ 4, 2022

ಸಂಭವಾಮಿ ಯುಗೇ ಯುಗೇ (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಬಂದೇ ಬರುವರು ಕಷ್ಟ ಕೊಡಲೆಂದು ಅಂದುಕೊಳ್ಳದಿರಿ,
ದೇಶಕ್ಕಾಗಿ ವಿವಾಹವಾಗದೆ ಪ್ರತಿಜ್ಞೆಗೈದವರು.
ಗೀತೆಯಲ್ಲಿ ಹೇಳಿದಂತೆ, ಮತ್ತೊಮ್ಮೆ ಗೀತೆ ಹೇಳಲು ಸಂಭವಾಮಿ ಯುಗೇ ಯುಗೇ.

ಎಲ್ಲಾ ಬೆಳ್ಳಗೆ ಎನ್ನುವ ಭರವಸೆ ನಂಬಬಹುದೇ?
ಡಬಲ್ ಸರ್ಕಾರಗಳು ನೂಕ್ಕುತ್ತಾ, ಸಾಗಿರಬಹುದೇ ದೆಹಲಿ ಕಡೆಗೆ.

ಬದುಕು ದುರ್ಬಲ, ಕಾವ್ಯ ನೀರಸ.
ಪದ್ಮ ಪತ್ರದ ಮೇಲೆ ಕೂತು ನಿಂತು ಧ್ಯಾನಿಸಿ
ಜನರ ಕಷ್ಟ ಪಟಕಿಸುವ ಎಂಟು ವರ್ಷ. ಘೋಷಣೆಗಳು ಏಳು ಬೀಳು, 
ಬಿಡುವು ಉದ್ಯೋಗಕ್ಕೆ
ಅಭಿವೃದ್ಧಿ ಗಡಿಯಾರ ನಿಂತು ಹೋದಂತೆ.

ಭಾರತ ರಚನೋತ್ಸವ ಭೂತ ಭವಿಷ್ಯತ್ ವರ್ತಮಾನದ ಚಿಂತೆ
ಸಂಕಟ ತೆಗೆದುಕೊಳ್ಳುವ ರಾಜ ಹುಟ್ಟುವ ಸಂಭವ ಸಾಧ್ಯವೆ
ಬಿಸಿಲು ಬಾಡಿದೆ ಅಧಿಕಾರಿಗಳು
ವೇದಾಂತ ಓದುತ್ತಾ,
ಶರತ್ ಕಾಲ ಕವಿ ಹೃದಯ ಉಬ್ಬುತಿಹುದು
ಮಲ್ಲೇಶಪುರ ಕೃಪಾಶ್ರಯ ನೋಡಲು ಸಾಲು ಸಾಲು.

ಶರತ್ ಕಾಲ ವಿಪತ್ ಕಾಲ ಯಾವುದು ಅವರನ್ನು ಕೇಳಬೇಕು.
ಶುಭ ಸಮಯ ಉಳ್ಳವರಿಗೆ ಕೋಟಿ ಕೋಟಿ ಟಾಯ್ಲೆಟ್ ನಲ್ಲಿ,
ಹಿಂದಿನ ಸಾಲಿನ ಹುಡುಗರು ರಾಜಕೀಯ ದಾಂಡು ಹಿಡಿದಿಹರು
ಬಾಯಾರಿದ ಬದುಕಿಗೆ ಗಂಗಾ ಜಲ ತರುತ್ತೇವೆಂದರು.

ಸುಖದ ಸುಪ್ಪತ್ತಿಗೆಯಲ್ಲಿ ಮೊದಲ ಬಾರಿಗೆ ಕೂತವರ ದರ್ಪ,
ರಜೋಗುಣದವರು ತಾಮಸಿಗರಾದರು, ಅಧಿಕಾರದ ನೆರಳಿನಲ್ಲಿ.
ಸತ್ಯ ಮೇವ ಜಯತೇ ನಂಬಲಾರದವರು ಪಾರ್ಲಿಮೆಂಟಲಿ.
ದಿವ್ವ ಸಂದೇಶ ದಿವಸ ಬರುತಿದೆ 
ತೆರಿಗೆ ಕೇಳಿ
ಚುನಾವಣಾ ತೊಡಕು ಬಿಡಿಸುವುದು, ಪ್ರಜಾಪ್ರಭುತ್ವ !

ಬಡತನ ಬೆಳೆಸಲು ಬಂದ ಸಂಭವಾಮಿ ಯುಗ ಯುಗೇ.
- ಪ್ರೊ. ಗಂಗಾರಾಂ ಚಂಡಾಲ, ಮೈಸೂರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...