ಶನಿವಾರ, ನವೆಂಬರ್ 5, 2022

ಕರುನಾಡಿನ ಮಣ್ಣಲ್ಲಿ ನೆಲೆ ; ಕನ್ನಡದಿಂದ ಬೆಲೆ (ಕವಿತೆ) - ಶಾಂತಾರಾಮ, ಶಿರಸಿ.

ನೆಲೆಯ ಕಲ್ಪಿಸಿಹುದು ಕರುನಾಡಿನ ನೆಲ,
ದಾಹ ತೀರಿಸುತಲಿಹುದು ಕರುನಾಡಿನ ಜಲ,
ಹಸಿವ ನೀಗಿಸಿ ತುಂಬುತಿಹಳು ತೋಳ್ಬಲ,
ಕನ್ನಡದ ಕಂಪು ಪಸರಿಸಿದೆ ಜಗದಗಲ...

ಅಚ್ಚ ಹಸಿರಿನ ಸಿರಿಯ  ಕಂಪು,
ಜನಪದ ಸೊಗಡಿನ ಇಂಪು,
ಕವಿ-ಸಾಹಿತಿ-ಬರಹಗಾರರ  ಸಾಹಿತ್ಯದ ಛಾಪು,
ಹಳೆಯ ನೆನಪು-ಹೊಸದರ ಬಿಳುಪು-ಕನ್ನಡದ ಹೊಸಬಗೆಯ ಹೊಳಪು...

ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ವೈಭವದ ಸೆಲೆ,
ನಾಟ್ಯ-ಸಂಗೀತ,ಕಲೆ-ಶಿಲ್ಪಕಲೆ,
ಯಕ್ಷಗಾನ-ಗಾಯನ-
ಅನ್ನದಾನಗಳಿಗೆ ಕಟ್ಟಲಾಗದು ಬೆಲೆ...

ಅಮ್ಮ ಎಂದು ಮೊದಲು ತೊದಲು ನುಡಿದ ಕನ್ನಡ,
ದೇಹದ ಪ್ರತೀ ಕಣ-ಕಣದಲ್ಲೂ ಕನ್ನಡ,
ಕನ್ನಡಕ್ಕಾಗಿ ಎಲ್ಲರೂ ಒಂದಾಗಿ,
ಕನ್ನಡದ ಮಾತುಗಳು ಹೊರಬರಲಿ ಸುಶ್ರಾವ್ಯ ಹಾಡುಗಳಾಗಿ...
- ಶಾಂತಾರಾಮ, ಶಿರಸಿ. ಉತ್ತರ ಕನ್ನಡ.
7676106237


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...