ಶನಿವಾರ, ನವೆಂಬರ್ 26, 2022

ದರ್ಪಣ ಸುಂದರಿ (ಕವಿತೆ) - ಮಧುಮಾಲತಿ ರುದ್ರೇಶ್.

ನೂರು ಭಾವ ಮೇಳೈಸಿದೆ ವದನದಲಿ
 ಚೆಲುವಿಗೆ ದರ್ಪಣವೇ ನಾಚುತಿಹುದು ನೋಡಿಲ್ಲಿ

 ಡಂಕಣ ಜಕಣರ ಮನೋ ಭೂಮಿಕೆಯ ಮದನಿಕೆ
 ಶಿಲ್ಪಿಗಳ ಕೈಯಲ್ಲರಳಿದ ದರ್ಪಣ ಶಿಲಾಬಾಲಿಕೆ 

ಸಾವಿರ ಶಿಲ್ಪಗಳಲಿ ಮನ ಸೆಳೆವ ದರ್ಪಣಸುಂದರಿ
 ಕಲಾರಸಿಕರಿಗೆ ಸ್ಪೂರ್ತಿ ಚಿಲುಮೆ ಕಾವ್ಯ ಮಯೂರಿ

 ನಾಟ್ಯರಾಣಿ ಶಾಂತಲೆಯೇ ಶಿಲೆಯಾಗಿ ನಿಂತಿಹಳು
 ಸುರಲೋಕದಪ್ಸರೆಯೇ ಈ ಅಂದಕೆ ನಾಚುತಿಹಳು

 ಶಿಲೆಯೊಳ್ ಕಲೆಯರಳಿಸಿ ನಿಂದ ಬೇಲೂರ ಬಾಲೆ
 ಶಿಲ್ಪಕಲಾ ಗುಡಿಯೊಳು ಅರಳಿರುವ ಜಾಜಿ ಮಲ್ಲೆ
 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...