ಬುಧವಾರ, ಜನವರಿ 4, 2023

ವನಕೂಟ (ಕವನ) - ಬಿ.ಹೆಚ್.ತಿಮ್ಮಣ್ಣ.

ಸವೆದು ಸೇವಿಸಿ ಆನಂದಿಸಿ ಬಾರೊಮ್ಮೆ ವನಕೂಟಕ್ಕೆ
ಸಿಗುವುದು ಅಲ್ಲೊಂದು ಔಷಧಿಯು ಜೀವನಕ್ಕೆ
ಪ್ರಕೃತಿ ಮಡಿಲಿನ ಬಣ್ಣ ಬಣ್ಣದ ಚಿತ್ತಾರದ ಮಂಚಕ್ಕೆ
ತಲೆಯೊರಗಿ ದಿಂಬಿಗೆ ಕಣ್ಮುಚ್ಚು ಸೋತು ಅದರ ಸೌಂದರ್ಯಕ್ಕೆ

ಕೂಡಿ ಗುಂಪಿನೊಂದಿಗೆ ಸೇರಿ ಹಾಕು ನೀನು ಹೆಜ್ಜೆಯನ್ನ
ಎಳೆವಯದ ಶತಮನಗಳೊಂದಿಗೆ ಸಾಗು ದಾರಿಯನ್ನ 
ಅಲ್ಪ ಪ್ರಮಾಣದ ಸಂತಸ ಬಿಟ್ಟು ಆನಂದಿಸು ಸುಖವನ್ನ
ನರಕಕ್ಕೆ ತಳ್ಳುವ ಚಿಂತೆಯು ಮೈಲು ದೂರಿರುವುದು ಬಿಟ್ಟು ನಿನ್ನ

ಚಿಗುರುವ ಮೊಗ್ಗುಗಳ ಗುಂಪೊಳಗೆ ಅರಳಿದ ಹೂಗಳಂತೆ 
ಮುಂದಾಗಿ ನಡೆದು ಅವುಗಳೊಂದಿಗೆ ಬೆರೆತು ಸೇರುವಂತೆ 
ಸ್ವಾಗತಿಸುತ್ತವೆ ಪುಟ್ಟ ಕಾಲಿನ ಮಕ್ಕಳು ಜೇನ್ನೊಣಗಳಂತೆ
ಗೂಡು ಕಟ್ಟಿ ಸಿಹಿ ತುಪ್ಪವ ನೀಡು ಮನಮುಟ್ಟುವಂತೆ

ತಯಾರಿ ನಡೆಯುವುದು ನಾಳಿನ ಯಾತ್ರೆಗೆ 
ರಾತ್ರಿವಿಡಿ ಸಿದ್ಧವಾಗುವುದು ಮನೆಯಾಗ ಅಡುಗೆ 
ಮಾಡುವ ಭರದಲ್ಲಿ ಕಣ್ಣು ಜಾರೋದಿಲ್ಲ ನಿದ್ದೆಗೆ 
ಆಯ್ತಪ್ಪ ಎಂದು ಹೊರ ನಡೆದು ಬಂದರೆ ಆದಿತ್ತು ಬೆಳಗ್ಗೆ

ರುಚಿಕರದ ಪದಾರ್ಥಕ್ಕೆ ವಾಸನೆ ಬಾರದಂತೆ ತುಂಬಿಡುವರು
ಖೈದಿಯಂತೆ ಕೈಯಲ್ಲಿ ಹಿಡಿದು ಮುಂದೆ ಮುಂದೆ ಸಾಗುವರು
ನಿಸರ್ಗದ ಜೊತೆಗೆ ಸಂಬಂಧವ ಬೆಳೆಸುವರು 
ಸವಿಗಾಳಿಯ ಸೇವಿಸಲು ಸಿದ್ದರಾಗಿ ನಿಲ್ಲುವರು

ತುಂಬಿಟ್ಟ ಡಬ್ಬಿಗಳು ತೆರೆದರೆ ಘಮ್ಮೆಂದಿತು ವಾಸನೆ
ಕಣ್ಣುಗಳು ಪಿಳಿಪಿಳಿ ನೋಡ್ತಾವ ಅವುಗಳ ಮೇಲೆ ಸುಮ್ಮನೆ 
ಕೈಗೆ ಸಿಗುವುದೇ ತಡ ಸೇರುವುದು ಬಾಯಿಗೆ ಥಟ್ಟನೆ
ಎನ್ನುವ ಆತುರದಲ್ಲಿ ಮೇಲೆತ್ತಬೇಕೆನಿಸುತ್ತದೆ ತಟ್ಟೆಯನ್ನೆ

ಕಣ್ಣೆದುರಿಗೆ ಕಾಣ್ತಿದೆ ಭಕ್ಷ ಭೋಜನ 
ಬೆರಳುಗಳು ಚಡಪಡಿಸುವವು ಮಾಡಲು ಸ್ಪರ್ಶವನ್ನ
ಸಿಕ್ಕಾಗ ಅನುಭವಿಸು ಇಂತಹ ವನ ಮಂದಿರದ ರಸದೌತಣವನ್ನ
ತಿನ್ನಲೇಬೇಕು ವರ್ಷದೊಳಗೆ ಒಮ್ಮೆಯಾದರೂ ಒಂದಿನ

ಹಸಿರು ತಂಗಾಳಿ ಬಾಯೊಳಗೆ ತಂಪಾಗಿ 
ತುತ್ತೊಂದಿಗೆ ಸೇರಿ ಒಳಹೊಕ್ಕುವುದು ತ್ಯಾವಾಗಿ
ನಿಶ್ಚಿಂತಿ ಸಮೃದ್ಧಿ ಸಿಗುವುದು ದೇಹಕ್ಕೆ ಚೆನ್ನಾಗಿ
ಎಲ್ಲರೊಂದಿಗೆ ಬೆರೆಯಬೇಕು ಆಟಿಕೆಯ ಗೊಂಬೆಯಾಗಿ

ನಿನ್ನಲ್ಲಿರುವುದು ಹಂಚಿ ತಿನ್ನುವುದೇ ಸಹಕೂಟ
ಮರೆಯದಿರು ಗೆಳೆಯರೊಂದಿಗೆ ಆಡಿದ ನೆನಪಿನಾಟ
ಮರೆಯಾಗುವುದು ನಿನ್ನೋಳುದುಗಿರುವ ನೂರಾರು ಚಟ 
ಸಿಂಗರಿಸಿಕೊಂಡ ಸೌಗಂಧ ಬೀರುವ ಸೊಬಗಲ್ಲಿ ಮಾಡು ಒಮ್ಮೆ ವನಕೂಟ

  - ಬಿ.ಹೆಚ್.ತಿಮ್ಮಣ್ಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...