ಮಂಗಳವಾರ, ಮಾರ್ಚ್ 21, 2023

ಹೊಸ ವರುಷದ ಬುನಾದಿ, ಈ ಯುಗಾದಿ (ಕವಿತೆ) - ಬಿ.ಎಂ. ಮಹಾಂತೇಶ.

ತನಿ, ಅತನಿಗಳೆಂಬ ಎಲೆ
ಕಾಯಿ ಹೊತ್ತ ಮರಗಳು
ಅವುಗಳ ಸುರಿಸಿ ಹೊಸತನವ
ಬಯಸುವ ಕಾಲವಿದು...

ನರಜೀವಿಯ ಹಳೆ ತೊಗಲು
ಕಳೆದು, ಹೊಳೆಯುವ
ಹೊಸ ಬಣ್ಣ ತಿರುಗುವ
ಸಂತಸದ ವಸಂತ ಕಾಲವಿದು...

ರವಿ ಬರುವ ಮುನ್ನ
ಎದ್ದು, ಕೋಗಿಲೆಯ ನವ
ರಾಗವ ಕೇಳುತ, ವಿಶೇಷವಾಗಿ
ರತ್ನಪಕ್ಷಿಯ ಹುಡುಕುವ ಕಾಲವಿದು...

ಹಸುಗೂಸಂತೆ ನಗುವ ಮಾವಿನೆಲೆಯ,
ತೋರಣವ ಕಟ್ಟಿ, ಬೇವು ಬೆಲ್ಲವನು
ಸೇರಿಸಿ ಕುಟ್ಟಿ, ಸಮನಾಗಿ
ಸವಿಯುವ ಕಾಲವಿದು...

ಹಾಕಿದೆ ಈ ಕಾಲವು
ಹೊಸತನು, ಹೊಸತನ
ಹೊಸ ಮನಕೆ ಬುನಾದಿ...
ಅದುವೇ ನಮ್ಮ ಈ ನಾಡಹಬ್ಬ
ನವ ವಸಂತದ ಯುಗಾದಿ...

- ಬಿ.ಎಂ. ಮಹಾಂತೇಶ.
ವಿಜಯನಗರ
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...