ಶನಿವಾರ, ಮಾರ್ಚ್ 18, 2023

ಹೋಗೋಣ.. ಸಿದ್ಧವೈತಿ ದಿಬ್ಬಣ (ಕವಿತೆ) - ಬಿ ಎಂ ಮಹಾಂತೇಶ.

ಮನಿಯ ಅಂಗಳದಾಗ
ಸಣ್ಣನೆ ಬೆಂಕಿ ಉರಿದೈತಿ...
ತಣ್ಣನೆ ಬೀಸುವ ಗಾಳಿಗೆ
ತಮಟೆಯು ಮೈಯ ಕಾಸೈತಿ...

ನೀನಿಲ್ಲದ ಸುದ್ದಿಯು
ಎಲ್ಲೆಲ್ಲೂ ಹಬೈತಿ...
ಬಂಧು ಬಳಗವೆಲ್ಲ ಬಂದು
ನಿನ್ನ ಸುತ್ತ ಕುಳಿತೈತಿ...

ನೀ ಗಳಿಸಿದೆಲ್ಲವುದು
ಗೊಗರೆದು ಅಳುತೈತಿ...
ನಿನಗಿಡುವ ಎಡಿಯು
ತಿನ್ನಲು ಕಾಗಿ ಕಾದು ಕುಳಿತೈತಿ...

ಎಲ್ಲಾ ಮುಗಿದಮ್ಯಾಲ
ಇಲ್ಲಿ ನಿನ್ನದೇನೈತಿ...
ಹೊಂಡು ಬಾ
ದಿಬ್ಬಣ ಸಿದ್ದವೈತಿ...

- ಬಿ. ಎಂ. ಮಹಾಂತೇಶ
ವಿಜಯನಗರ..
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...