ಮನಿಯ ಅಂಗಳದಾಗ
ಸಣ್ಣನೆ ಬೆಂಕಿ ಉರಿದೈತಿ...
ತಣ್ಣನೆ ಬೀಸುವ ಗಾಳಿಗೆ
ತಮಟೆಯು ಮೈಯ ಕಾಸೈತಿ...
ನೀನಿಲ್ಲದ ಸುದ್ದಿಯು
ಎಲ್ಲೆಲ್ಲೂ ಹಬೈತಿ...
ಬಂಧು ಬಳಗವೆಲ್ಲ ಬಂದು
ನಿನ್ನ ಸುತ್ತ ಕುಳಿತೈತಿ...
ನೀ ಗಳಿಸಿದೆಲ್ಲವುದು
ಗೊಗರೆದು ಅಳುತೈತಿ...
ನಿನಗಿಡುವ ಎಡಿಯು
ತಿನ್ನಲು ಕಾಗಿ ಕಾದು ಕುಳಿತೈತಿ...
ಎಲ್ಲಾ ಮುಗಿದಮ್ಯಾಲ
ಇಲ್ಲಿ ನಿನ್ನದೇನೈತಿ...
ಹೊಂಡು ಬಾ
ದಿಬ್ಬಣ ಸಿದ್ದವೈತಿ...
- ಬಿ. ಎಂ. ಮಹಾಂತೇಶ
ವಿಜಯನಗರ..
9731418615
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ