ಶುಕ್ರವಾರ, ಏಪ್ರಿಲ್ 21, 2023

ನೋಡ್ಲಾ ಅಲ್ಲಿ ಅವ್ರನಡೀರ್ಲಾ ಕಿತ್ಕಳ್ರಾ ಒಡ್ಲಾ ( ಕವಿತೆ ) - ದುರ್ಗೆಶ್.

ನೋಡ್ಲಾ  ಅಲ್ಲಿ ಅವ್ರ
ನಡೀರ್ಲಾ ಕಿತ್ಕಳ್ರಾ ಒಡ್ಲಾ  

ತಿನ್ನೊದ್ನ ಹೆಂಗ್ ಬೆಂಕಿಗ್ ಹಕ್ತವ್ರೆ ನೊಡ್ರುಲಾ
ದುರಂಕಾರ  ಹೆಂಗ್ ಐತೆ ಅವ್ರ್ಗೆ
ದ್ರಾಕ್ಷಿ ನೋಡ್ಲ ಗೊಡಂಬಿ ನೋಡ್ಲ ಅಲ್ಲಿ
ಬೆಂಕಿಲಿ ಹೆಂಗ್ ಬೈತೈತೆ ನೋಡ್ಲ
ಅಲ್ನೊಡ್ಲಾ ಕೊಬ್ಬರಿ ಒಂದ್ ವಾರ ಸಾರ್ ಆಗ್ತೈತೆ ನಮಗೆ
ನೊಡ್ಲಾ ಅವ್ರ ದುರಂಕಾರ ಎಸ್ಟ್  ಐತೆ

ಬಾದಾಮಿ, ಖರ್ಜೂರ, ಏಲಕ್ಕಿನಾ ನೋಡುದ್ರೆ ಹೊಟ್ಟೆ ಹುರಿತೈತೆ
ನಾವ್ ಕಷ್ಟ ಪಟ್ಟು ಬೆಳೆದು ತಿನ್ನದೆ ಮಾರ್ತಿವಿ,
ನೀರ್ ಚಲ್ದಂಗೆ ಬೆಂಕಿಗೆ ಹಾಕ್ತವ್ರಲ್ಲ ಎಸ್ಟ್ ಐತೆ ಇವ್ರ್ಗೆ
ಆನೆ ಕ್ವಟ್ಲೇ ತಡ್ದು ಬಾಳೆ ಬೆಳ್ಸುದ್ರೆ ತೂದ್ ಬಿಸಾಕ್ತರಲ್ಲ.
ನನ್ ಮಕ್ಲಿಗ್ ತಿನ್ನಕೆ ನಾನೆ ಬಿಟ್ಟಿಲ್ಲ ಪುಡಿಗಾಸುಗೊಸ್ಕರ  ಹಾ..... ಅಲಾ ಇವ್ರನ್ನ ಏನ್ ಮಾಡ್ಬೇಕು

ದೇವ್ರಾ ಹೇಸ್ರು ಹೇಳ್ಕೊಂಡು  ಮೊದ್ಲೇ ಮೋಸ ಮಾಡ್ತಾರೆ ಅದ್ರಲ್ಲು ತಿನ್ನೊದ್ನು ಹೀಗ್ ಮಾಡುದ್ರೆ ನಾವ್ ಏನ್ ತಿನ್ನೋದು?
ಕಲ್ಮುಂದೆ ಏಲ್ಲಾನು ಇಡ್ತರೆ ಅದು ತಿನ್ನಲ, ನಮ್ಗೆ ಕೊಡ್ರಿ ಅಂದ್ರೆ ಕೊಡಲ್ಲ.
ಆ ದೆವ್ರು ಏನಾದ್ರೂ ಬಂದ್ರೆ ಅವನಿಗೆ ಹೇಳಿ ಚರ್ಮ ಸುಲಿಸ್ತಿನಿ ನೋಡ್ತಾ ಇರ್ಲಾ

ಅರ್ಥ ಆಗ್ದೇ ಇರೋ ಮಾತಲ್ಲಿ ಬುಡ ಬುಡ ಅಂತಾರೆ 
ಬುಡ ಬುಡ ಅಂತ ಸುರಿತಾವ್ರೆ 
ಹೊಟ್ಟೆ ಉರಿತೈತೆ ನೊಡ್ಲ ಕಣ್ಣಲ್ಲಿ ರಕ್ತ ಬತ್ತದಲ್ಲ 
ನೊಡ್ಲಾ ಅಲ್ಲಿ ಅವ್ರ 
ನಡೀರ್ಲಾ ಕಿತ್ಕಳ್ರ ಒಡ್ಲಾ.

- ದುರ್ಗೇಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...