ಬುಧವಾರ, ಸೆಪ್ಟೆಂಬರ್ 13, 2023

ಸುಂಕದವನು (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಒಂದು ಬಾರಿ ಅವಕಾಶ ತಾನಾಗಿ ಮೂಡಲಿದೆ ನಾಟ್ಯ

ಮತ್ತೊಂದು ಬಾರಿ ಅವಕಾಶ ದುಪ್ಪಟ್ಟು ಬೆಲೆ ರೈತರ ಬೆಳೆಗಳಿಗೆ

ನಾನೊಂದು ಭರವಸೆಯ ಬೆಳಕು ವಿಶ್ವದ ಮುಂದೆ ತಲೆ ಎತ್ತಲು

ಸವೆಸಿ ಹತ್ತು ವರ್ಷಗಳು ಅಮೃತ ಕಾಲ ಮುಂದುವರಿಯುವ ಆಸೆ

ಗಾಂಧಿ ಜಯಂತಿ ಆಚರಣೆ ಮಾಡುತ್ತಲೆ ಗಾಂಧಿಗೆ ಗುಂಡು ಹೊಡೆದವರಿಗೆ ಶಾಸಕ ಸ್ಥಾನ
ಮಂದಿರದಲ್ಲಿ

ಆಹಾರ ಕಾಯ್ದೆ ಅಪೌಷ್ಟಿಕತೆ ವಿಶ್ವ ನುಡಿ ನಾಲಿಗೆ ಹಿಂದೆ ಸರಿದಿದೆ

ನುಡಿ ಸ್ವಾತಂತ್ರ್ಯ ಸುಂಕದೆಸರಲ್ಲಿ ತನಿಖೆ ತನ್ನ ಪರ ಮಾತಾಡುವವರನ್ನಾಗಿ ಮಾಡಲೆಂದು

ಕಾದ ಹೆಂಚಿನ ಮೇಲೆ ಹಾಕಿ ಕೆನ್ನೆ ಸವರುತ್ತಾ ಉರಿ ಹೆಚ್ಚು ಹೆಚ್ಚು

ಮಕ್ಕಳ ಹೆರುವಂತೆ ಸನ್ಯಾಸಿ ಉಪದೇಶ ಹತ್ತು ದೇಶಕ್ಕಾಗಿ

ಸುಂಕ ವಸೂಲಿ ಮಾಡುವ ಆಸೆ
ಸಾಕುವ ಉಸಾಬರಿ ಬೇಡ

ಮಕ್ಕಳು ಬಡವರಾಗಿಯೇ ಇರಬೇಕು ಹೇಳಿದಂತೆ ಕೇಳಲು ಲಜ್ಜೆಗೇಡಿ ಮನಸ್ಸು

ಸೈನಿಕರಲ್ಲಿ ಹೆಣ್ಣಿನ ಪಡೆ ಪಥಸಂಚಲನ ಅಯ್ಯಪ್ಪನ ದರ್ಶನ ದೂರ ದೂರ ಸುಪ್ರೀಂ ಹೇಳಿದರು

ಸುಂಕದವರು ಸ್ವಾಮಿ ಕನಿಕರ ಇಲ್ಲದವರು ಉಳ್ಳವರಿಗೆ ಉಚಿತ ಸಾಲ ಮನ್ನಾ 

ನಿಗಿ ನಿಗಿ ಕೆಂಡ ಹಾಗೆಯೇ ಇರದು ಇದ್ದಲು ಅಥವಾ ಬೂದಿ ಆಗಬೇಕು ಚುನಾವಣೆಯಲ್ಲಿ

ಅವಸರ ಮರೆವು ತಾನು ನೀಡಿದ ಭರವಸೆ ಸೆಡವು ಸುಟ್ಟುಕೊಂಡ ಚೊರ್ರೆಂದು

ಬೂದಿಯಲ್ಲಿ ಮಲಗಿ ಹೇತು ನಾತ ಹೊಡೆದರು ಸುಗಂಧ ಜನರಿಗಾಗಿ ಹದಿನೆಂಟು ಗಂಟೆ ದಿನಕ್ಕೆ

ದಾರಿ ನಡೆದದ್ದು ಕರ್ಮ ಸಿದ್ಧಾಂತ ನಂಬುವ ಹಾಗೆ ಅರಮನೆ ಬಂದೀಖಾನೆ ಆದೀತು

ಬಲಗಾಲದಲ್ಲಿ ಒದ್ದರೆ ಒಳ್ಳೆಯ ಕಾರ್ಯಕ್ರಮವೇ ಘೋಷಣೆಯೆ

ಬಿಕ್ಕಳಿಕೆ ಬರುತ್ತೆ ಎಂದು ನೀರು ಹಿಡಿದು ಸುಪ್ರಭಾತ ಹೇಳುವ ಹಾಗೆ ಸುಂಕ ವಸೂಲಿ

ಕತ್ತಿ ಅಲಗಿನ ಮೇಲೆ ನಡೆದು ಹೆಜ್ಜೆ ತಪ್ಪಿ ಹೋಯಿತು ಓಟು ಮುಳುವಾಯಿತು ಹೆಣ್ಣೆಂದು ತಿಳಿದು

ಹಗೆ ಸಾಧಿಸುವ ರೀತಿ ಸುಂಕ ಹೆಚ್ಚಳ ಪೆಟ್ರೋಲ್ ಖಾಸಗಿ ದರ ಮೀರಿ

ಪಾಪ ಪುಣ್ಯ ಉಳ್ಳವರಿಗೆ ಮಾತ್ರ ಬಡವರಿಗೆ ಸಾಲ ಉಳಿಯಿತು ಅಭಿವೃದ್ಧಿ ಹೆಸರಲ್ಲಿ

ಬಣ್ಣಗೆಟ್ಟ ಬಾವುಟವನ್ನು ಎತ್ತಿ ಎತ್ತಿ
ಓಟು ಕೇಳಿದರೆ ಸಾಕು ಪ್ರತಿಯೊಬ್ಬರ ಇವಿಎಂ ಒಳಗೆ ಕರಾಮತ್ತು

ಹಸಿವೆ ತಿಳಿಯದವರು ಬೆಂದು ಅನ್ನವಾಗಲು ಬಿಡದೆ ಸುಂಕ ಕೊಟ್ಟಿಲ್ಲ ಎಂದು

ಅರ್ದ ಸುಟ್ಟ ಕಟ್ಟಿಗೆ ತುಂಡು ಕರಕಲಾಗಿ ತಣ್ಣಗೆ ಇದ್ದಿಲಾಗದೆ ಪರಿತಪಿಸುತ್ತದೆ

ಕಹಿ ನೋವಿನ ಕಣ್ಣಿರ ಇಂಗುಗುಂಡಿ ಗಂಟಲಲ್ಲಿ ಸಮಾಧಿ ಹೆಸರು ಅಭಿವೃದ್ಧಿ

ವೀರ್ಯ ಫಲಿಸದಿರಲು ಕಸರತ್ತು ದಾಳಿ ತನ್ನ ಒಪ್ಪದವರ ಅನ್ನದ ಶಾಪ ಉಚಿತ ಕಡಿತ

ಹತ್ತಿಕ್ಕುವ ಕುತ್ತಿಗೆಗೆ ಕೈ ಹಾಕಿ ಕೈಗೆ ಬೇಡಿ ಹಾಕುವ ಪ್ರತಿಜ್ಞೆ ಪತ್ರಕರ್ತರಿಗೆ

ಬದುಕು ಕಾದ ಹೆಂಚು ಅಚ್ಚೇ ದಿನ ಆಯೇಗಾ ಸುಟ್ಟುಕೊಂಡ ಬೆರಳು ಮಸಿ ಗುರುತು

ಆ ರಾತ್ರಿ ಕಣ್ಮುಚ್ಚಿ ಕುಳಿತ ಹೆಣ್ಣು ಮರು ದಿನ ಬೆಳಗು ನಗುವ ಹಾಗೆ ಸುಮ್ಮನೆ ನಿಂತಳು

ತುಡುಗು ದನಗಳು ಆಯ್ಕೆ ಶಾಸನಸಭೆಗೆ ಬೆರಗು ಮಾತುಗಳಿಗೆ

ಸುಂಕ ಜಾಸ್ತಿ ಆಯಿತು ಸುಂಕ ಕಡಿಮೆ ಮಾಡುತ್ತೇವೆ ಜನದನ್ ಗ್ಯಾರಂಟಿ

ಹೆಣ್ಣಿನ ಶಾಪ ಗೆಜ್ಜೆ ತಪ್ಪಿದರೂ ನಾಟ್ಯವೆಂದು ಹೇಳುವವರಿಗೆ ಅಭಿವೃದ್ಧಿ ಮಂಕಾಗಿ

ಸೀದು ಹೋದ ಬದುಕು ಕಾನೂನು ಪಾಲನೆ ಕೆಲವರಿಗೆ

ಅದೆಷ್ಟು ಸುಂಕ ಹೆಚ್ಚಳ ಸಹಿಸಬೇಕು ಕೆಲವು ಸರದಾರರ ಮೋಜು ಮಸ್ತಿಗಾಗಿ.

- ಪ್ರೊ ಗಂಗಾರಾಂ ಚಂಡಾಲ, ಮೈಸೂರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...