ಮಂಗಳವಾರ, ಸೆಪ್ಟೆಂಬರ್ 17, 2024

ಜೀವನ...


ಜೀವನ....

ಜೀವನವಿದು,
ಆತ ಕೊಟ್ಟ ತೀರದ ಸಾಲ,
ದುಡಿಯಬೇಕು ನಿತ್ಯ
ಬರುವ ತನಕ ತೀರುವ ಕಾಲ...

ಈ ಸಾಲದ ಮೇಲೆ,
ಮತ್ತೆ ಜವಾಬ್ದಾರಿಯ ಬಡ್ಡಿ,
ಬರಿ ಬಡ್ಡಿಗಾಗೆ ಕನಸೆಲ್ಲವನು,
ಒತ್ತೆ ಇಟ್ಟು ಸುಮ್ಮನೆ ದುಡಿ...

ಉಳಿದ ನೆಮ್ಮದಿಯನ್ನಾದರೂ,
ಗಿರವಿ ಇಡಬಹುದಿತ್ತು,
ಅದು ಸಾಲದ ಇನಾಮಿಗೆ 
ಮೀಸಲಾಗಿ ಹೋಯ್ತು...

ಕೊನೆಗೂ ತೀರದ ಈ ಜೀವನದ 
ಸಾಲಕ್ಕಾಗಿ, ದಿನಾ ದುಡಿಯಬೇಕು,
ತೀರದ ಆ ಒಂದು ದಿನ
ಜೀವವನೇ ಒತ್ತಿ ಇಡಬೇಕು...
ಬಿ ಎಂ ಮಹಾಂತೇಶ
ಕೂಡ್ಲಿಗಿ, ವಿಜಯನಗರ. ಜಿ.
9731418615

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...