""ಗಂಧದ ಗುಡಿ""
ಗಂಧದಗುಡಿಯಿದು ತಾಯ್ನೆಲವು
ಸೆಳೆದಿದೆ ಕನ್ನಡಮ್ಮನ ಒಲವು
ವಿಶ್ವವನ್ನೇ ತನ್ನತ್ತ ಸೆಳೆವ ಚೆಲುವು
ಭಾರತಾಂಬೆಯ ಹೆಮ್ಮೆಯ ಮುಕುಟವು
"'' ಹಬ್ಬ ""
ಕನ್ನಡಿಗರ ಹೆಮ್ಮೆಯ ಹಬ್ಬವಿದು
ನಾವೆಲ್ಲ ಸಂಭ್ರಮಿಸುವ ದಿನವಿದು
ಬೇದ ಭಾವ ತೊರೆದು ನಲಿಯೋಣ
ಜನ್ಮಭೂಮಿ ನಮ್ಮದಿದು ಕಾಯೋಣ
""ಮುಡಿಪಿರಲಿ ಪ್ರಾಣ""
ಬಂದಿತಿದೋ ನಮ್ಮ ರಾಜ್ಯೋತ್ಸವ
ಕನ್ನಡ ನುಡಿಯ ರಥೋತ್ಸವ
ಆಗದಿರಲಿ ಬರಿಯ ಘೋಷಣ
ತಾಯ್ನುಡಿಗೆ ಮುಡಿಪಿರಲಿ ಪ್ರಾಣ
ಮಧುಮಾಲತಿ ರುದ್ರೇಶ್ ಬೇಲೂರು
💐🌷🙏
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ