ಗುರುವಾರ, ಏಪ್ರಿಲ್ 10, 2025

ಮತ್ತೂ ಅನಾಥ !

ಮತ್ತೂ ಅನಾಥ!

ಮಗು ಮರಣಿಸಿದ ಮಾರನೆಯ ದಿನ
ಸೂರ್ಯನಿರುವುದಿಲ್ಲ
ಮನದ ತುಂಬ ಕಾರ್ಮೋಡಗಳ ಸುಳಿ

ಮಗು ಮರಣಿಸಿದ ಮಾರನೆಯ ದಿನ
ಮನೆಯಂಗಳದ ಹೂವರಳುವುದಿಲ್ಲ
ಬಾಡಿದ ಕಂಗಳ ನಡುವಲಿ ಕೆಂಡದೋಕುಳಿ

ಮಗು ಮರಣಿಸಿದ ಮಾರನೆಯ ದಿನ
ಅನ್ನ ಬೇಯುವುದಿಲ್ಲ
ಸಂಕಟ ತುಂಬಿದ ಹೊಟ್ಟೆಯೊಲೆ ತುಂಬ ಬೂದಿ

ಮಗು ಮರಣಿಸಿದ ಮಾರನೆಯ ದಿನ
ಹಳೆಯ ಜಗತ್ತನ್ನೆಲ್ಲ ಕಳೆದುಕೊಂಡು
ಮತ್ತದೇ ಶೂನ್ಯದಲ್ಲಿ ನಿಲ್ಲುವುದು ಹೊಸ ಜಗತ್ತು
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...