ಬುಧವಾರ, ಜುಲೈ 21, 2021

ಶಿವಸ್ತುತಿ - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

  ॥ಶಿವಸ್ತುತಿ ॥  

ಓಂ ಓಂ ಓಂ ನಮ ಶಿವಾಯ ।
ಅಯೋನಿಜ ಆಕಾಯ ಅಗೋಚರ ಶಿವ ।
ಅಜನ್ಮ ಅದೃಶ್ಯ ಅಹಿಂಸಾತ್ಮಕ ಶಿವ।
 ಇವನೇ ನಮ್ಮ ಪರಮಾತ್ಮ ॥

ಜನನಿ ಗರ್ಭಧಿ ಜನಿಸದ ಅಯೋನಿಜ ।
ಜನನ ಮರಣ ಚಕ್ರವಿರದ ಜಗದೀಶ್ವರ ।
ದೃಷ್ಟಿಗೆ ಕಾಣದ ಸೃಷ್ಟಿಕರ್ತನಿವ ಅಗೋಚರ ।
ಇವನೇ ನಮ್ಮ ಪರಮಾತ್ಮ ॥

ಜ್ಯೋತಿಗಳ ಪರಂಜ್ಯೋತಿ ಕೈಲಾಸಪತಿ ।
ಆತ್ಮಗಳ ಚೇತನಶಕ್ತಿ ಪಶುಪತಿ ।
ನಿರಾಕಾರ ನಿರ್ವರ್ಣ ನೀಲಕಂಠ ।
ಇವನೇ ನಮ್ಮ ಪರಮಾತ್ಮ ॥

ದೇವಾತ್ಮ ಧರ್ಮಾತ್ಮರ ಅಶುತೋಷ ।  
ಪುಣ್ಯಾತ್ಮ ಮಹಾತ್ಮರ ಮಾರ್ಕಂಡೇಯ ।
ಪಾಪಾತ್ಮಾ ದುಷ್ಟಾತ್ಮಗಳ ವಿನಾಶಕ।
ಇವನೇ ನಮ್ಮ ಪರಮಾತ್ಮ ॥

ತ್ಯಾಗ ಜೀವನದ ಮಹಾತ್ಮರ ಪಿತ।
ದಾನಧರ್ಮದ ಪುಣ್ಯಾತ್ಮರ ಜನಕ।
ಧರ್ಮಸಂಸ್ಥಾಪಕ ಧರ್ಮಾತ್ಮರ ಪ್ರಜಾಪಿತ ।
ಇವನೇ ನಮ್ಮ ಪರಮಾತ್ಮ ॥

ವಿಶ್ವಾಂಭರ ಮಹೇಶ್ವರ ಅರ್ಧನಾರೀಶ್ವರ । 
ಶಿವ ಪರಶಿವ ರುದ್ರದೇವ ।
ಭೋಲೇನಾಥ ಭೋಲೇಬಾಬಾ ಭೀಮಾಶಂಕರ ।
ಇವನೇ ನಮ್ಮ ಪರಮಾತ್ಮ ॥

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ
 ಶಿಕ್ಷಕ ಎ.ಸಿ.ಒ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲಕಲ್ಲ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...