ಮಂಗಳವಾರ, ಆಗಸ್ಟ್ 31, 2021

ಕರೋನಾ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಕೊರೋನಾ  

ಜಗವನೆಲ್ಲ ನಡುಗಿಸಿ ಮತ್ತೆ ಸ್ಥಬ್ಧವಾಗಿಸಿ
ಮನುಜ ಕುಲದ ನಾಶಕೆಂದು ಪಣವ ತೊಟ್ಟು ನಿಂತಿದೆ
ಹೊರಗೆ ತಾನು ಕಾಣದೆ ಎಳೆಯ ಹರೆಯ ಎನ್ನದೆ
ಹೊಕ್ಕು ದೇಹ ಉಸಿರು ತೆಗೆವ ಮಾರಿ ರೋಗ ಕೊರೋನಾ

ಗಾಳಿಯಲ್ಲಿ ಅಲ್ಲಿ ಇಲ್ಲಿ ನೆಲೆಸಿ ಹೊಕ್ಕು ಮನುಜರಲ್ಲಿ
ಅವರು ಇವರು ಎನ್ನದಂತೆ ಹರಡುತಿಹುದು ಎಲ್ಲರಲ್ಲಿ
ಮಕ್ಕಳನ್ನು ವೃದ್ಧರನ್ನು ಮೊದಲು ಬಿಡೆನು ಎನ್ನುತಿಹುದು
ಮದ್ದು ತರುವ ಮುಂಚೆ ನಾನು ಗೆದ್ದು ಬೀಗ ಬಲ್ಲೆನೆಂದು

ಭಯದಿ ದಿನವ ಕಳೆಯುತಿಹೆವು ಕೆಲಸವೆಲ್ಲ ನಿಲ್ಲಿಸಿ
ಕಣ್ಣ ಎದುರೆ ಕೊಲ್ಲುತಿಹುದು ಶೋಕದಲ್ಲಿ ಮುಳುಗಿಸಿ
ಅಯ್ಯೋ! ಎಂತ ಕ್ರೂರಿ ನೀನು ಕರುಣೆ ಇರದ ಕಲ್ಕಿಯೆ
ಮಟ್ಟ ಹಾಕೊ ದಿನವು ಬರದು ತೊರೆದು ಜಗವ ತೊಲಗುವೆ

ಅಂತರವನು ಕಾಯ್ದುಕೊಂಡು ಹರಡದಂತೆ ತಡೆಯುವ
ನಂತರದಿ ಅದನು ಕೊಂದು ಭೀತಿಯನ್ನು ತೊರೆಯುವ.

(ಮೊದಲ ಅಲೆಯ ಸಂದರ್ಭದಲ್ಲಿ  ರಚನೆ)
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...