ಸೋಮವಾರ, ಆಗಸ್ಟ್ 2, 2021

ಮಹಾನಾಯಕರು (ಕವಿತೆ) - ಶ್ರೀ ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ.

 ಮಹಾ ನಾಯಕರು

ನಾವು ಇಂದು ಸಂತೋಷದಿ
ಆಚರಣೆ ಮಾಡುವ ಈ ಸ್ವಾತಂತ್ರ್ಯವು
ಸಾವಿರಾರು ಜನರ ಬಲಿದಾನದಿ
ಉಳಿತು ಈ ಸಡಗರ ಅನುದಿನವು//

ಸುಮ್ಮನೆ ಸ್ವಾತಂತ್ರ್ಯ ನಮ್ಮಗೆ ಸಿಕ್ಕಿಲ್ಲ
ಅದು ಸಿಗುವ ವಸ್ತುವು ಆಗಿದಿಲ್ಲ
ಸ್ವಾತಂತ್ರ್ಯ ಬರಲು ಸಾವು ನೋವು ಆದವಲ್ಲ
ಅಲ್ಲಲ್ಲಿ ಶೌರ್ಯ ತ್ಯಾಗ ದಾನ ಮೆರೆದವಲ್ಲ//

ಅಂದರು ನಮ್ಮ ವೀರ ಮನುಜರು
ಚಿಂತೆ ಇಲ್ಲ ಮಣ್ಣಲ್ಲಿ ಮಣ್ಣಾದರು
ಸ್ವಾತಂತ್ರ್ಯವ ತರಲು ಪಣ ತೊಟ್ಟರು
ನಮ್ಮ ಪೂರ್ವಜರು ಹುಟ್ಟು ಹೊರಾಟಗಾರರು//

ಅವರು ದೇಶಾಭಿಮಾನವೆ  ಉಸಿರೆಂದರು
ದೇಶದ ಹೆಸರಲಿ ಅಮರರಾದರು
ಅವರಾದರು ಈ ದೇಶದ ಹೆಮ್ಮೆಯ ಮಕ್ಕಳು
ದಿನಾ ಪೂಜಿಸಲಿ ಇಂದು ಚಪ್ಪಾಳೆ ತಟ್ಟುವ ಕೈಗಳು//

ಆ ಧೀರ ಸೂರ ಮಹಾ ನಾಯಕರು
ಈ ಒಂದೇ ದಿನಕೆ ಸೀಮಿತ ಆಗದಿರಲಿ
ನಮ್ಮ ನಲಿವಿಗೆ ಕಾರಣ ಆ ಹುತಾತ್ಮರು
ಅವರು ಪೀಳಿಗೆಗೆ ಪ್ರೆರಣೆ ಆಗಲಿ//

✍ ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!ಭೈರಾಪೂರ, ತಾ!ಜಿ!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...