'ಗಣೇಶನ ಹಬ್ಬ'
ಮನಸ್ಸಿನಲ್ಲಿ ಖುಷಿ ತರುವ ಹಬ್ಬ
ವರ್ಷಕ್ಕೊಮ್ಮೆ ಆಗಮಿಸಿ
ಯುವಕರಲ್ಲಿ ಹರುಷವ ಉಣಿಸುವ ಹಬ್ಬವೇ ಗಣೇಶನ ಹಬ್ಬ....
ಯುವಕರಲ್ಲಿ ಜಾತಿ ಮತಗಳ
ಭೇದ ಮರೆತು ಸಕಲರ
ಸಮಾನರೆಂದು ಅರಿತು
ಬದುಕುವುದೇ ಗಣೇಶನ ಹಬ್ಬ .....
ಯುವಕರು ಎಲ್ಲಾ ಸೇರಿ
ಪಟಾಕಿ ಹಚ್ಚಿ. ಬಣ್ಣ ಹಚ್ಚಿ.
ತಲೆಗೆ ರಿಬ್ಬನ್ ಕಟ್ಟಿ.
ಗಣಪತಿ ಬಪ್ಪ ಗಣಪತಿ ಬಪ್ಪ
ಎಂದು ಹೇಳುವ ಹಬ್ಬವೇ
ಗಣೇಶನ ಹಬ್ಬ....
ಪ್ರೀತಿ ಹಂಚೋಣ.
ಆತ್ಮೀಯತೆ ಬೆಳೆಸೋಣ.
ಏಕತೆಯಲ್ಲಿ ಮುಂದೆ ಸಾಗೋಣ
ಬನ್ನಿ ಎಲ್ಲರೂ ಸೇರಿ
ಗಣೇಶನ ಹಬ್ಬ ಆಚರಿಸೋಣ.
- ಬಸವರಾಜಪ್ಪ ಪೂಜಾರ್ ಕೋಡಿಹಳ್ಳಿ .
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ