ಪೂಜಿತ
ದುಡ್ಡು ದುಡ್ಡು ಅಂತಾ ದುಡ್ಡಿಂದ ಓಡತಿ
ದಡ್ಡ ನಾ ದಡ್ಡ ಅಂತಾ ದಡ್ಡತನ ಸಾರುತಿ
ಗಿರಿ ಏರಿ ಗುರಿ ಭೇದಿಸಿ ನಗುತಿ
ಮೆರೆಯುವ ಜ್ಞಾನ ನೀಡಿದ ಗುರು ಮರತಿ//
ನಿಜ ಅಲ್ಲವೆ ಎಲ್ಲರಲ್ಲಿಯೂ ಇರದು ಶ್ರೇಷ್ಠತೆ
ಆದರೆ ಮರೆಯಲ್ಲ ಗುರು ಕಲಿಸುವಾಗ ಸಮಾನತೆ
ವಿಚಾರ ವಿನಿಮಯ ಮಾಡುವ ಎಲ್ಲರ ಜೊತೆ
ಅದ್ಭುತ ಅಮೋಘ ಪೂಜಿತ ಗುರು ನಡತೆ//
ಮನಕೆ ಸಿಗದು ನೆಮ್ಮದಿಯ ಶಾಂತಿ
ಕಾರಣ ಬಚ್ಚಿಟ್ಟ ಹಣ ತರುವದು ಚಿಂತಿ
ನೋವು ಉಚಿತ ಆಸೆ ಮಾಡಲು ಕ್ರಾಂತಿ
ಸಾವು ಖಚಿತ ಇದು ಸತ್ಯದ ಭ್ರಾಂತಿ//
ಅರಿ ಗುರು ಭವನ ಬೆಳದಿಂಗಳಂತೆ
ಅವರಿಂದ ಬದುಕಿದಿ ನಿನ್ನ ಕನಿಸಿನಂತೆ
ಸಾಧನೆ ನಾಡಲಿ ಹರಡಲು ತಂಗಾಳಿಯಂತೆ
ಬೆನ್ನು ತಟ್ಟಿದ ಗುರು ಮನದಲಿ ನಗಲಿ ಕುಸುಮದಂತೆ//
ಗೌರವಿಸು ಸಮಾಜದ ನ್ಯಾಯ ನೀತಿ
ಬಾಳಲು ಕಲಿಸಿದ ಗುರುವಿನ ರೀತಿ
ನೆರೆ ಹೊರಗೆ ಹಂಚು ಧರ್ಮದ ಪ್ರೀತಿ
ಆಗಲು ಮನ ಮನೆ ಬೆಳಗೋ ಜ್ಯೋತಿ//
- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!!ಭೈರಾಪೂರ, ತಾ!ಜಿ!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ