ಶನಿವಾರ, ಜನವರಿ 15, 2022

ನಾಡ ಅಸ್ಮಿತೆಯ ಜೀವಿಗಳು (ಕವಿತೆ) - ವೀರಂತರೆಡ್ಡಿ ಜಂಪಾ

ಕರುನಾಡಿನ ಹೆಮ್ಮೆಯ ಕುಡಿಗಳು
ಸದಾ ಜೋಡಿ ದಂಪತಿಗಳು
ಸದಾ ನಸುನಗುವ ತೋರಣ
ಇನ್ಫೋಸಿಷ್ ದ ಮಾಲಿಕರು

ಕುಲಕರ್ಣಿ ಮನೆತನದಲಿ ಸುಧಾ
ಮೂರ್ತಿ ಮನೆತದ ನಾರಾಯಣರು
ಒಬ್ಬರನ್ನೊಬ್ಬರು ಅರಿತವರು
ಹಾಲು ಜೇನಿನಂತೆ ಬೆರೆತವರು

ಕಷ್ಟಕೋಟಲೆಗಳ ನಡುವೆ ಎದ್ದವರು
ಹಿಂದಣ ಹೆಜ್ಜೆ ಅರಿತ ಅರಿವಿನ ಗುರು
ಶೋಷಿತ ಸಮುದಾಯಕೆ ಹಾರೈಸಿದವರು
ಅಳುವ ದನಿಗೆ ದನಿಯಾಗಿ ನಿಂತವರು

ದೇಶ-ವಿದೇಶಗಳಲಿ ಭವ್ಯ ಭಾರತ
ಚಿತ್ರಣವ ನೀಡಿ ಉದ್ಯಮಿತತ್ವ ಬೆಸೆದವರು
ಸ್ತ್ರೀ- ಸಮಾನತೆಗಾಗಿ ಪರಿಶ್ರಮಿಸಿದವರು
ಸದಾ ಮೌನಿಗಳಾಗಿ ಆಸರೆಯಾದವರು

ಭಾರತೀಯ ಸಂಸ್ಕೃತಿ ಅರಿತವರು
ಸಾಹಿತ್ಯ ರಚನೆಗೆ ತೊಡಗಿದವರು
ಬಿಳಿ-ಕರಿಯ ಸಮನ್ವಯಗೊಳಿಸಿದ
ನಾಡ ಅಸ್ಮಿತೆಯ ಹೆಮ್ಮೆಯ ಜೀವಿಗಳು.
         
- ವೀರಂತರೆಡ್ಡಿ ಜಂಪಾ
ಸಹ-ಶಿಕ್ಷಕರು ಸರಕಾರಿ ಪದವಿ-ಪೂರ್ವಕಾಲೇಜು (ಬಾಲಕರ) ಪ್ರೌಢಶಾಲಾ ವಿಭಾಗ ಹುಮನಾಬಾದ.ಜಿ.ಬೀದರ ೫೮೫೩೩೦
ದೂ.ಸಂ.೯೪೪೮೪೪೦೬೩೩.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...