ಬರೆಯಲು ಬರವು ಬಂದಿದೆ
ಅಕ್ಷರಗಳ ಬರ
ಭಾವನೆ ಒಣಹುಲ್ಲಾಗಿದೆ
ಮಳೆ ಎಂದು ಬರುವುದೋ
ಅಥವಾ ಕಣ್ಣೀರಿನಿಂದಲೇ
ಈ ಕಾಗದ ಒದ್ದೆಯಾಗುವುದೋ
ಬರೆದ ಅಕ್ಷರಗಳು
ಕಣ್ಣೀರಿಂದ ತೊಪ್ಪೆಯಾದವು
ಉಳಿದದ್ದು ಒದ್ದೆಯಾದ ಕಾಗದ
ಬರಿಯ ಕಾಗದ
ಒಣಭೂಮಿಯಂತೆ
ನನ್ನ ಮನಸಿನಂತೆ
ಛೇ,..
ಯಾವಾಗ ಈ ಮನಸು
ಅರಳುವುದೋ ಗೊತ್ತಿಲ್ಲ :
ಅಕ್ಷರಗಳೇ ಇಲ್ಲಾ ಅಥವಾ ಸತ್ತಿವೆ
ಕೇವಲ ಅಕ್ಷರಗಳಲ್ಲ
ಅಕ್ಕರೆಯ ನೆನಪುಗಳಿಲ್ಲ
ಸತ್ತ ಮನಸು
ಖಾಲಿ ಕಾಗದವಾಯ್ತು
ಏನೂ ಬರೆಯಲು ಮನಸ್ಸಿಲ್ಲ
ಕಡೆಗೂ ಅಕ್ಷರಗಳ ಬರ ನೀಗಲಿಲ್ಲ !!
✒️ರಾಜು ನಂಜಪ್ಪ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ