ಸಾಹಿತ್ಯ ಪತ್ರಿಕೆ
ನವ ಬರಹಗಾರರ ವೇದಿಕೆ
ಮತ್ತೆ,ಮತ್ತೆ ಬರಿಯಬೇಕೆನ್ನುವ ಪೀಠಿಕೆ.
ಕಲಿಸುವದು ಹೊಸಬರಿಗೆ ಬರಹ
ವಿಚಾರಿಸುವದು ಅನೇಕ ತರಹ
ಕೊಡುವುದು ಎಲ್ಲರಿಗೂ ಪ್ರೋತ್ಸಾಹ.
ಪ್ರತಿಭೆಗಳಿಗೆ ಹಾಕುವದು ಮನ್ನಣೆ
ರೂಪಿಸುವದು ಅಕ್ಷರಗಳ ಜೋಡಣೆ
ಕೊಡುವದು ನವ,ನವೀನತೆಯರಿಗೆ ಪ್ರೇರಣೆ.
ತೋರಿಸುವುದು ಕಾ,ಗುಣಿತದ ಶಬ್ದ
ಮಾಡುವದು ಅಕ್ಷರಗಳ ಸದ್ದು
ಕವಿ,ಕವಿತ್ರೆಯರಿಗೆ ಅದು ಬದ್ದ.
ಅಕ್ಷರವೆ ಸುಧಾರಣೆಯ ಸೂತ್ರ
ಪದ ಬಂದವೆ ಅಸ್ತ್ರ
ಅಭಿವೃದ್ಧಿಯೆ ಸಾಹಿತ್ಯ ಗಳ ಮಂತ್ರ.
ನಡೆಸುವರು ವರ್ಷಕೊಮ್ಮೆ ಅಕ್ಷರ ಜಾತ್ರೆ
ಬರಹಗಾರರು, ಸಾಹಿತ್ಯಗಳ ಕ್ಯೆಗೊಳ್ಳುವರು ಯಾತ್ರೆ
ಸಕಲ ಕ್ಷೇತ್ರಕ್ಕೆ ಕೊಡುವದು ಜಾಗ್ರತೆ.
- ಕಾಡಪ್ಪಾ ಮಾಲಗಾಂವಿ, ಶಿರೋಳ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ