ಯುಗಾದಿ ಹೊಸ ವರುಷ ಭಾರತೀಯರಿಗೆ ಪ್ರಕೃತಿಯ ಕೊಡುಗೆ/
ನವ ಪಣ೯ಗಳು ಪಲ್ಲವಿಸಿ , ಮಲ್ಲಿಗೆ ಘಮಘಮಿಸಿ ಪ್ರಕೃತಿ ತೊಡುವಳು ಹೊಸ ಉಡುಗೆ/
ತೆನೆ ತುಂಬಿ ಸೆಳೆವ ಮಾವು ಬೇವು -ಹೊಂಗೆಗಳು ಚೈತನ್ಯದ ಒಸಗೆ/
ಕೋಗಿಲೆಯ ಕುಹೂ ಕೂಜನದ ಮಧುರಾಲಾಪ ಕಿವಿಗಳಿಗೆ/
ನೋವು -ನಲಿವಿನ ಸಮ್ಮಿಶ್ರಣವೀ ಬದುಕೆಂಬ ಸಹಜ ಸಂದೇಶ/
ಬೇವು -ಬೆಲ್ಲ ಸವಿಯುವರು ಸಮನಾಗಿ ಸ್ವೀಕರಿಸಲೆನ್ನುವುದೇ ಉದ್ದೇಶ/
ವಿಜ್ಞಾನದ ಹಿಂದೋಡುತ್ತ ಕ್ರೌಯ೯ ಮೆರೆಯುತಿಹ ಮಾನವ/
ಇರುವಷ್ಟೇ ಗಿಡಬಳ್ಳಿಗಳಲ್ಲಿ ಚಿಗುರ ತರುವಳು ಪ್ರಕೃತಿ ಮರೆತು ತನ್ನ ನೋವು/
ಝಣ ಝಣ ಕಾಂಚಾಣದ ಹಿಂದೋಡದಿರು ಮನುಜ/
ನಿನ್ನಂತೇ ಇತರೆಲ್ಲ ಪ್ರಾಣಿ ಪಕ್ಷಿಗಳು ಪ್ರಕೃತಿಯ ಮಕ್ಕಳು ಅರಿ ಈ ಸತ್ಯ ಸಹಜ/
*ಜಲದ ಅಭಾವ, *ತಾಪಮಾನ ಏರಿಕೆ* ಎಂಬ ನೀನೇ ತೋಡಿಕೊಂಡ ಹಳ್ಳಗಳಲ್ಲಿ ನೀ ಬೀಳುತ್ತಿರುವೆ/
ಪ್ರಕೃತಿ ಮಾತೆ ನಾನು ಕ್ಷಮಿಸುತ್ತ ನಿನಗೆ *ಯುಗಾದಿಯ* ಚಿತ್ರ ಬಿಡಿಸಿಹೆ/
ಓದು ಪುಟಗಳ ತೆರೆದು *ಯುಗಾದಿ* ಹಿಂದೆ ಹೇಗಿತ್ತೆಂದು/
ಕಣ್ತೆರೆದು ನೋಡಿ ಅವಲೋಕಿಸು ಇಂದೇನಾಗುತ್ತಿದೆ ಎಂದು/
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ