ಶುಕ್ರವಾರ, ಏಪ್ರಿಲ್ 21, 2023

ಹೇ.. ಬಾಬಾ, ನೀ ಮರಳಿ ಬಾ.. (ಕವಿತೆ) - - ಬಿ. ಎಂ. ಮಹಾಂತೇಶ.

ಹೇ.. ಜಗದೊದ್ಧಾರಕ.. ಮಹಾನಾಯಕ
ನೀ ಮತ್ತೊಮ್ಮೆ ಮರಳುವೆಯ...
ನೊಂದವರ ಬದುಕಿನ
ಅಳಲನ್ನೊಮ್ಮೆ ಆಲಿಸುವೆಯ...

ಹುಟ್ಟುಹಬ್ಬಕ್ಕೊಮ್ಮೆ ನಿನ್ನ ಫೋಟೋವನ್ನು
ಕೆಳಗಿಳಿಸಿ, ಮಾಡುವರು ಪೂಜೆ...
ಆದರೆ ನೀ ಬರೆದಿಟ್ಟ ಆ ಪುಸ್ತಕವನ್ನು
ಅಳಿಸಿ ನೀಡಿರುವರು ರಜೆ...

ಮತ್ತೊಮ್ಮೆ ಹುಟ್ಟಿ ಬಾ, ಮುಟ್ಟಿನಲೇ
ಬದುಕುವವರನು ಮಾಡಲು ಶುಚಿ...
ಈ ಕೆಟ್ಟ ವ್ಯವಸ್ಥೆಯನ್ನು
ಓಡಿಸಲು ಗಡಿಯಾಚಿ...

ಆದರೂ ಒಮ್ಮೊಮ್ಮೆ
ಚಿಂತಿಸುವೆನು ನಾನು...
ಬದಲಾಗಬಹುದೇ ಈ ಜಗವು
ಮರಳಿದರೆ ನೀನು...?

- ಬಿ. ಎಂ. ಮಹಾಂತೇಶ
SAVT ಕಾಲೇಜ್ ವಿದ್ಯಾರ್ಥಿ
ಕೂಡ್ಲಿಗಿ
9731418615


1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...