ಹೇ.. ಜಗದೊದ್ಧಾರಕ.. ಮಹಾನಾಯಕ
ನೀ ಮತ್ತೊಮ್ಮೆ ಮರಳುವೆಯ...
ನೊಂದವರ ಬದುಕಿನ
ಅಳಲನ್ನೊಮ್ಮೆ ಆಲಿಸುವೆಯ...
ಹುಟ್ಟುಹಬ್ಬಕ್ಕೊಮ್ಮೆ ನಿನ್ನ ಫೋಟೋವನ್ನು
ಕೆಳಗಿಳಿಸಿ, ಮಾಡುವರು ಪೂಜೆ...
ಆದರೆ ನೀ ಬರೆದಿಟ್ಟ ಆ ಪುಸ್ತಕವನ್ನು
ಅಳಿಸಿ ನೀಡಿರುವರು ರಜೆ...
ಮತ್ತೊಮ್ಮೆ ಹುಟ್ಟಿ ಬಾ, ಮುಟ್ಟಿನಲೇ
ಬದುಕುವವರನು ಮಾಡಲು ಶುಚಿ...
ಈ ಕೆಟ್ಟ ವ್ಯವಸ್ಥೆಯನ್ನು
ಓಡಿಸಲು ಗಡಿಯಾಚಿ...
ಆದರೂ ಒಮ್ಮೊಮ್ಮೆ
ಚಿಂತಿಸುವೆನು ನಾನು...
ಬದಲಾಗಬಹುದೇ ಈ ಜಗವು
ಮರಳಿದರೆ ನೀನು...?
- ಬಿ. ಎಂ. ಮಹಾಂತೇಶ
SAVT ಕಾಲೇಜ್ ವಿದ್ಯಾರ್ಥಿ
ಕೂಡ್ಲಿಗಿ
9731418615
ನಿನು ಯತ್ನವ ಮಾಡು , ನಾನು ಯತ್ನವ ಮಾಡುವೆ ಆ ಬಾಬಾ ನಮ್ಮ ರೂಪದಲ್ಲಿಯೆ ಬರುವನು. ಈ ಜಗಕ್ಕೆ
ಪ್ರತ್ಯುತ್ತರಅಳಿಸಿ