ಶನಿವಾರ, ಏಪ್ರಿಲ್ 8, 2023

ಸ್ವಾಭಿಮಾನದ ಸಿರಿವಂತ ನಗು (ಕವಿತೆ) - ಶ್ರೀಮತಿ ರೇಖಾ ನಾಡಿಗೇರ.

ವೃದ್ಧ ದಂಪತಿ ಕುಳಿತ ಟ್ರಾಕ್ಟರದು ತೋರಿದೆ ಗಿರಿಯಂತೆ/
ಶಿವ -ಪಾವ೯ತಿಯರೇ ಜೊತೆಯಾಗಿ ಕಂಗೊಳಿಸುವಂತೆ/

ವಿವಾಹ ಧಮ೯ ಸಂಪನ್ನಗೊಳಿಸಿ ಬಾಳ ಸಂಜೆಯಲಿಹರು ಇವ೯ರೂ/
ದುಡಿಮೆಯೇ ದೈವ ಎನುವ ಛಲದವರು/

ಶರೀರ ಸಹಕರಿಸುವ ತನಕ ದುಡಿದೇ ಉಣ್ಣುವ ತವಕ/
ಹಾಳು -ಮೂಳು ವಿಚಾರಕ್ಕೆಳಿಸದೇ ಭೂತಾಯಿ ಸೇವೆ ಗೈವ ಸೇವಕ/

ಆಡಂಬರವಿಲ್ಲದ ಸರಳ ಜೀವನ ಶೈಲಿ/
ಇದ್ದಷ್ಟೂ ಸಾಲದು ಇನ್ನೂ ಬೇಕೆನುವವರು ನೋಡಿ ಕಲಿಯುವಂತಾಗಲಿ/

ಶ್ರೀಮಂತ ಕಾಯಿಲೆಗಳಿಲ್ಲದ ಆರೋಗ್ಯ ಸಿರಿತನ/
ದುಡಿದುಣ್ಣುವ ಸ್ವಾಭಿಮಾನೀ ಜೀವಕ್ಕೆಲ್ಲಿದೆ? ಬಡತನ/

ಒಡಲ ಕುಡಿಯ ಕಳೆದುಕೊಂಡರೂ ಶಿವನಿಚ್ಛೆ ಎಂದ ಹಿರಿ ಮನ/
ಇದ್ದರೂ ಸಂಕಟ, ಮೊಗದ ನಿರಿಗೆಗಳಲ್ಲಿ ತೋರದ ನಿಲಿ೯ಪ್ತತನ/

ಕಲಿತವರಂತೆ ಅಹಂ ಗೆ ಇವರ ಬಳಿ ಇಲ್ಲ ಜಾಗ/
ಅನುಸರಿಸಿಕೊಂಡು ಬಾಗಿ ಸಾಗುವ ಜಾಣ್ಮೆಯೇ ಬದುಕಿನ ಭಾಗ/

ಸಿಕ್ಕರೂ ಸಿಗಬಹುದು ಹರನೊಲುಮೆ ಜೊತೆಯಾಗೇ ಅಂತಿಮ ಯಾತ್ರೆಯ ಮುಗಿಸುವ ಯೋಗ/
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...