ಶುಕ್ರವಾರ, ಫೆಬ್ರವರಿ 2, 2024

ಬದುಕಿ ಬಾಳಿರಿ (ಕವಿತೆ) - ಶ್ರೀ ಮುತ್ತು ಯ ವಡ್ಡರ.

ಬದುಕಿ ಬಾಳಿರಿ ಹೆತ್ತವರ ನೆರಳಲಿ
ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ
ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ
ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ

ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ
ತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿ
ಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿ
ಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ

ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗು
ಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗು
ಮಕ್ಕಳು ಪೂಜಿಸುವ ತಂದೆ ನೀನಾಗು
ಸಂಬಂಧಿಕರು ಸಂಬಂಧ ಕಳೆದುಕೊಳ್ಳದ ಬಂಧುವಾಗು

ಹಿರಿಯರಿರಲಿ ಕಿರಿಯರಿರಲಿ ಮಾತು ನಯವಾಗಿರಲಿ
ನಿನ್ನವರಿರಲಿ ಇರದಿರಲಿ ವ್ಯಕ್ತಿತ್ವ ಬದಲಾಗದಿರಲಿ
ಯಾರಿರಲಿ ಇರದಿರಲಿ ಎಲ್ಲೆಲ್ಲಿಯೂ ನಿನ್ನ ಹೆಸರೇ ಅಜರಾಮರವಾಗಿರಲಿ
ಬದುಕಿರಲಿ ಸತ್ತಿರಲಿ ನಮ್ಮ ಹೆಸರಿಗೆ ಒಂದು ಗೌರವವಿರಲಿ

- ಶ್ರೀ ಮುತ್ತು. ಯ. ವಡ್ಡರ
 ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
Mob-9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...