ಗುರುವಾರ, ಫೆಬ್ರವರಿ 1, 2024

ಗಣರಾಜ್ಯೋತ್ಸವ (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಬಂದಿದೆ ಜನವರಿ ಇಪ್ಪತ್ತಾರು 
ಎಳೆಯೋಣ ಗಣರಾಜ್ಯೋತ್ಸವದ ತೇರು
ಸಂವಿಧಾನ ಜಾರಿಗೆ ಬಂದ ದಿನ
ಭಾರತದ ಇತಿಹಾಸದ ಚಾರಿತ್ರಿಕ ಕ್ಷಣ

ವಿವಿಧತೆಯಲ್ಲಿ ಏಕತೆ ಸಾರುವ ದಿನ
ಎಷ್ಟೇ ಜಾತಿ, ಮತ ,ಪಂಥಗಳಿದ್ದರು 
ಎಲ್ಲರೂ ಸಮಾನರು ಎನ್ನುವ ಸಂವಿಧಾನ 
ಕೇಸರಿ ಬಿಳಿ ಹಸಿರಿನಿಂದ ಕಂಗೊಳಿಸುವ ಧ್ವಜಾರೋಹಣ 
ಜಗಕೆ ಸಾರುವುದು ನಮ್ಮಯ ಸರ್ವಭೌಮತ್ವವನ್ನ  

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಂದೇ ಮಾತರಂ ಜಯ ಘೋಷ
ತಾಯಿ ಭಾರತಾಂಬೆಗೆ ಅದುವೇ ಹರುಷ
ದೇಶಕ್ಕಾಗಿ ಶೌರ್ಯ ಮೆರೆದವರ ಸ್ಮರಣೆ ದಿನ 
ಮೀಸಲಿಡೋಣ ದೇಶಕ್ಕಾಗಿ ನಮ್ಮ ತನುಮನ 

ಸ್ತಬ್ಧಚಿತ್ರ ,ಪರೇಡ್ಗಳ  ನೋಟ ಆಕರ್ಷಣ
ಯುದ್ಧ ವಿಮಾನ ಕ್ಷಿಪಣಿಗಳ ಶಕ್ತಿ ಪ್ರದರ್ಶನ 
ನಾಡು ನುಡಿಯ ವೈಭವದ ಅನಾವರಣ
ನಾವು ಭಾರತೀಯರೆಂಬುದೇ ನಮ್ಮ ಗುಣ

ಗಂಗೆ,ತುಂಗೆ,ಕಾವೇರಿ ಹರಿವ 
ನಾಡು
ಎಲ್ಲರೂ ಒಂದೇ ಎನ್ನುವ ಶಾಂತಿಯ ಬೀಡು 
ಸರ್ವಧರ್ಮ ಸಮನ್ವಯದ ಐಕ್ಯತೆಯ ಗೂಡು 
ತಾಯಿ ಭಾರತಾಂಬೆಯೆ ಮತ್ತೊಮ್ಮೆ ಇಲ್ಲಿಯೇ ಜನ್ಮ ನೀಡು.

- ಬಸವರಾಜ ಕರುವಿನ,
    ಬಸವನಾಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...