ಗುರುವಾರ, ಫೆಬ್ರವರಿ 1, 2024

ಗಣರಾಜ್ಯೋತ್ಸವ (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಬಂದಿದೆ ಜನವರಿ ಇಪ್ಪತ್ತಾರು 
ಎಳೆಯೋಣ ಗಣರಾಜ್ಯೋತ್ಸವದ ತೇರು
ಸಂವಿಧಾನ ಜಾರಿಗೆ ಬಂದ ದಿನ
ಭಾರತದ ಇತಿಹಾಸದ ಚಾರಿತ್ರಿಕ ಕ್ಷಣ

ವಿವಿಧತೆಯಲ್ಲಿ ಏಕತೆ ಸಾರುವ ದಿನ
ಎಷ್ಟೇ ಜಾತಿ, ಮತ ,ಪಂಥಗಳಿದ್ದರು 
ಎಲ್ಲರೂ ಸಮಾನರು ಎನ್ನುವ ಸಂವಿಧಾನ 
ಕೇಸರಿ ಬಿಳಿ ಹಸಿರಿನಿಂದ ಕಂಗೊಳಿಸುವ ಧ್ವಜಾರೋಹಣ 
ಜಗಕೆ ಸಾರುವುದು ನಮ್ಮಯ ಸರ್ವಭೌಮತ್ವವನ್ನ  

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಂದೇ ಮಾತರಂ ಜಯ ಘೋಷ
ತಾಯಿ ಭಾರತಾಂಬೆಗೆ ಅದುವೇ ಹರುಷ
ದೇಶಕ್ಕಾಗಿ ಶೌರ್ಯ ಮೆರೆದವರ ಸ್ಮರಣೆ ದಿನ 
ಮೀಸಲಿಡೋಣ ದೇಶಕ್ಕಾಗಿ ನಮ್ಮ ತನುಮನ 

ಸ್ತಬ್ಧಚಿತ್ರ ,ಪರೇಡ್ಗಳ  ನೋಟ ಆಕರ್ಷಣ
ಯುದ್ಧ ವಿಮಾನ ಕ್ಷಿಪಣಿಗಳ ಶಕ್ತಿ ಪ್ರದರ್ಶನ 
ನಾಡು ನುಡಿಯ ವೈಭವದ ಅನಾವರಣ
ನಾವು ಭಾರತೀಯರೆಂಬುದೇ ನಮ್ಮ ಗುಣ

ಗಂಗೆ,ತುಂಗೆ,ಕಾವೇರಿ ಹರಿವ 
ನಾಡು
ಎಲ್ಲರೂ ಒಂದೇ ಎನ್ನುವ ಶಾಂತಿಯ ಬೀಡು 
ಸರ್ವಧರ್ಮ ಸಮನ್ವಯದ ಐಕ್ಯತೆಯ ಗೂಡು 
ತಾಯಿ ಭಾರತಾಂಬೆಯೆ ಮತ್ತೊಮ್ಮೆ ಇಲ್ಲಿಯೇ ಜನ್ಮ ನೀಡು.

- ಬಸವರಾಜ ಕರುವಿನ,
    ಬಸವನಾಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...