ಗುರುವಾರ, ಆಗಸ್ಟ್ 22, 2024

ಬದುಕಿನ ಮುಖಗಳು..

""ಬದುಕಿನ ಮುಖಗಳು""

 ಹುಟ್ಟು ಸಾವು ಬದುಕಿನೆರಡು ಮುಖಗಳು 
ಎಲ್ಲರೂ ದೇವನಾಡಿಸುವ ಪಾತ್ರಧಾರಿಗಳು 

ಬದುಕ ನಾಲ್ಕು ದಿನದ ಪಯಣದಲಿ
ನಸು ನಗುತ ಸಾಗೋಣ ಜೊತೆಯಲಿ

 ಸ್ವಾರ್ಥದ ಕೂಪದಲಿ ಬೇಯದಿರಲಿ ಮನ 
ದೇವನೊಲಿಯುವಂತೆ ಸಾಗಿಸೋಣ ಜೀವನ 

ಹುಟ್ಟಿನ ಖಚಿತದಷ್ಟೇ ಸಾವು ಅನಿವಾರ್ಯ
 ಮಾಡೋಣ ಮರಣದಾಚೆಗೂ ಹೆಸರುಳಿಯುವ ಕಾರ್ಯ

 ಬದುಕಪುಟದಲಿ ಜನನ ಮರಣಗಳು 
ದೇವ ಬರೆದ ಅಳಿಸಲಾಗದ ಅಕ್ಷರಗಳು

 ದಕ್ಕಿದಷ್ಟೇ ಆಸ್ವಾದಿಸೋಣ ಬಾಳ ಬುತ್ತಿಯನು 
ಜನನದಷ್ಟೇ ಸಾರ್ಥಕ್ಯಗೊಳಿಸೋಣ ಮರಣವನು
  ಮಧುಮಾಲತಿ ರುದ್ರೇಶ್ ಬೇಲೂರು ✍️✍️

ಅಪ್ಪ

ಅಪ್ಪ...

ನನ್ನ ಹೆಗಲ ಮೇಲೆ 
ಜವಾಬ್ದಾರಿಗಳ ಹೊರೆ ಬಿದ್ದಾಗಲೇ,
ಅಪ್ಪನ ಶ್ರಮದ ಅರಿವಾಗಿತ್ತು.


ದುಡಿದು ಬಂದ ದಣಿವಿನಲೂ ನನ್ನ 
ಪ್ರೀತಿಯಿಂದ ನೋಡಿದ ಅಪ್ಪನ 
ಮುಖ ನೆನಪಾಗಿತ್ತು.

ಎಲ್ಲ ಜವಾಬ್ದಾರಿಯ ಮಧ್ಯೆಯೂ, 
ಪ್ರೀತಿ ಕಾಳಜಿಗೆ ಕೊರತೆ ಮಾಡದ 
ಅಪ್ಪನ ಉಧಾರತೆ ನೆನಪಾಗಿತ್ತು.

ತನ್ನೆಲ್ಲಾ ನೋವನ್ನು ಬದಿಗಿಟ್ಟು, ನನ್ನ 
ಹೆಗಲಮೇಲೆ ಹೊತ್ತು ಕುಣಿದ ಅಪ್ಪನ 
ನೆನಪು ಅತಿಯಾಗಿ ಕಾಡಿತ್ತು.


ಆಸರೆಯ ಮಡಿಲಾಗಿದ್ದ ಅಪ್ಪ ಇಂದು 
ಜೊತೆಯಿಲ್ಲ ಎಂಬ ನೋವು ಕಣ್ಣಲ್ಲಿ, 
ಕಂಬನಿಯಾಗಿ ಜಾರಿತ್ತು..

ಅಪ್ಪನ ಅಪಾರ ಅಕ್ಕರೆ 
ಈ ಹೃದಯದಲಿ 
ಅಚ್ಚಳಿಯದೆ ಉಳಿದಿತ್ತು.
ಕವಿತಾ.ಎಚ್ 
ಎಚ್.ಎಸ್.ಎಸ್.ಬಿ ಸಿ ಎ ಕಾಲೇಜ್, ಗದಗ.

ಸೋಮವಾರ, ಆಗಸ್ಟ್ 19, 2024

ರಕ್ಷಾ ಬಂಧನ..

ಯಾವ ಋಣಾನು ಬಂಧವೂ 
ಯಾವ ಜನ್ಮದ ಪುಣ್ಯವೋ 
ಇದು ಅಣ್ಣ ತಂಗಿಯ ಪವಿತ್ರ
ರಕ್ಷೆಯ ರಕ್ಷಾ ಬಂಧನವೋ..

ಒಡ ಹುಟ್ಟಿದವರಷ್ಟೇ ಮಾತ್ರಕ್ಕೆ
ಅಣ್ಣ ತಂಗಿಯಾಗ ಬೇಕೆ
ಮನಸಿನ ಅಂತರಾಳದಿಂದ
ಅಣ್ಣ ಎಂದು ಕರೆದರೆ ಸಾಕಲ್ಲವೆ

ರಾಕಿ ಕಟ್ಟುವ ಬಂಧನದಲ್ಲಿ
ನಿನ್ನ ಮೊಗದಲ್ಲಿ ತಾಯಿಯ
ಪ್ರೀತಿಯನ್ನ ಕಣ್ಣುದುಂಬಿ
ಮರು ಓಮ್ಮೆ ನೋಡಬಹುದು..

ಹಣೆಗೆ ಕುಂಕುಮ ಇಟ್ಟು ಅಣ್ಣನಿಗೆ, ನೀನು ರಕ್ಷಿಸುವೆ.
ತಂಗಿಗೆ, ಅಣ್ಣ ಇನ್ನೊಂದು
ಜನ್ನವೆತ್ತಿಯಾದರೂ, ಇವಳು ನನಗೆ
ತಾಯಿಯಾಗಿ ಬರಲಿ ಎಂದು
ದೇವರಲ್ಲಿ ಪ್ರಾರ್ಥಿಸುವೆ...

ಈ ಭವ್ಯ ರಕ್ಷ ಬಂಧನಲ್ಲಿ
ದೇವರು ಸಹೋದರಿಗೆ
ಆಯಸ್ಸು.ಆರೋಗ್ಯ.ಶಕ್ತಿ.
ಕೊಟ್ಟು ಕಾಪಾಡಲಿ.... 💐

         ಕಾರ್ತಿಕ್... ✍️
     ( ಶ್ರವಣ ಬೆಳಗೊಳ )

ನಾನೇಕೆ ಅಂಜಲಿ...


ನಾನೇಕೆ ಅಂಜಲಿ...

ನೀನು ಇಂದು ಬರುವೆ 
ನಾಳೆ ಬರುವೆ ಅಥವಾ 
ಈಗಲೇ ಬರುವೆ, ಎಂಬ 
ಭಯವಿಲ್ಲ ನನಗೆ...

ಬಂದಾಗಂತು ಮನದಿಂದ 
ತನುವಿನಿಂದ ಒಪ್ಪುವೆ, ಅಪ್ಪುವೆ 
ಅಂತರಂಗದಿಂದ ನಗುವೆ,
ಬೇಡ ಅಳುವವರ ಗೊಡವೆ...

ನೀ ಬರುವ ವರೆಗೆ 
ಬದುಕು ನನ್ನನು ನಗಿಸಲಿ 
ನರಳಿಸಲಿ, ಅಲಿಸಲಿ,
ನೀ ಬರುವೆ ಎಂದು ನಾನೇಕೆ ಅಂಜಲಿ...

ನನಗಿಲ್ಲ ನೀ ಬರುವ ಅಂಜಿಕೆ,
ನಿನಗಾಗೇ ನನ್ನ ಕಾಯುವಿಕೆ,
ಬಂದರೆ ನೀ ಈ ಗಳಿಗೆ,
ಸಾಗುವುದು ಬೇಗ ಬಾಳ ಮೆರವಣಿಗೆ..
ಬಿ ಎಂ ಮಹಾಂತೇಶ್ 
ಕ್ಯಾಸನಕೆರೆ, ಕೂಡ್ಲಿಗಿ ತಾ.
ವಿಜಯನಗರ ಜಿ.

ಭಾನುವಾರ, ಆಗಸ್ಟ್ 18, 2024

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ...

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ.
ಜತ್ತ,; ತಾಲೂಕಿನ ಸುಕ್ಷೇತ್ರ ಉಮರಾಣಿ ಗ್ರಾಮದ ಜಿಲ್ಲಾ ಪರಿಷದ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ರಮೇಶ ಪಾಟೀಲ, ಅಮೂಲ್ಯಾ ಭೀಮಗೊಂಡ ಬಿರಾದಾರ, ಅಮೂಲ್ಯಾ ನವೀನ ಗಣಾಚಾರಿಯವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಕನ್ನಡ ಸಾಹಿತ್ಯ ಬಳಗ ಅಧ್ಯಕ್ಷರೂ ಹಾಗೂ ಲೇಖಕರಾದ ದಯಾನಂದ ಪಾಟೀಲ ಯವರು ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಶಿಕ್ಷಕರಾದ ಪ್ರಭಾಕರ ಸಲಗರ್, ಗುರುನಾಥ ಜುಂಜಾ, ಮಲ್ಲಿಕಾರ್ಜುನ ಸೋನಾರ, ಲಕ್ಷ್ಮಣ ಕೊಟ್ಟಲಗಿ, ಚೆನ್ನಮಲ್ಲಪ್ಪ ಕಿಟ್ಟದ, ಶ್ರವಣ ಜಾವಿರ ಮಲ್ಲೇಶಪ್ಪ ಕಾಂಬಳೆ, ಸಂದೀಪ ಕಾಂಬಳೆ, ಅಜಯ ಜುಜಗಾರ ಹಾಗೂ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು...


ದಯಾನಂದ ಪಾಟೀಲ 
ಅಧ್ಯಕ್ಷರು - ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...