ಜ್ಞಾನದ ದಿಗಂತದ ಬೆಳಕನು ತೋರುವ
ಗುರುವೇ ದಾರಿ ದೀವಿಗೆ;
ನೀತಿಸಂಹಿತೆಯ ಬೋಧನೆ ಮಾಡುವ
ಗುರುವೇ;ಧರ್ಮ ಸರ್ವರಿಗೆ
ಅಜ್ಞಾನದಿಂದಲೇ ಅಕ್ಷರ ಕಲಿಸುವ
ಗುರುವೇ ಜ್ಞಾನಾರ್ಜಕನಿಗೆ;
ಮಾನವ ಕುಲಕ್ಕೆ ಮೌಲ್ಯ ಬೋಧಿಸುವ
ಗುರುವೇ ಗತಿಯ ಅರಿವಿಗೆ;
ಶ್ರದ್ಧೆಯ ತೋರುತ ಸತ್ಯದ ಸಾರುವ
ಗುರುವೇ ಹಿರಿಯ ಜನತೆಗೆ;
ವಿದ್ಯೆಯ ಕಲಿಸುವ ಬುದ್ಧಿಯ ಹೇರುವ
ಗುರುವೇ ಶೀಲದ ಶಾಲೆಗೆ;
ಚರಿತ್ರೆಯ ಕಲಿಸಿ ಸಂಸ್ಕೃತಿ ಬೆಳೆಸುವ
ಗುರುವೇ ಪೂಜ್ಯ ಸಕಲರಿಗೆ;
ಶೀಲ ಸಂಸ್ಕಾರದ ಮಹಿಮೆಯ ಅರಿಹುವ
ಗುರುವೇ ಅನನ್ಯ ಮಾಣಿಕ್ಯ.
- ಹೆಚ್. ಎಸ್. ನಿಜಗುಣ.
ಹುಲ್ಲೇಕೆರೆ.- ತಿಪಟೂರು, ಉಪ ಪ್ರಾಂಶುಪಾಲರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ