ಬುಧವಾರ, ಜೂನ್ 23, 2021

ಬದುಕೆಂದರೆ ..? (ಕವಿತೆ) - ಡಾ ಯಲ್ಲಮ್ಮ ಕೆ.

ಬದುಕೆಂದರೆ..? 

'ಬದುಕೆಂದರೆ..? 
ಅಂದದ ಹೊದಿಕೆಯಲ್ಲ, 
ಹರಿದ ಚಿಂದಿಗಳನ್ನಾಯ್ದು 
ಒಂದುಗೂಡಿಸಿ ಕಲಾತ್ಮಕವಾಗಿ 
ಅಮ್ಮ ಹೊಲಿದ ಚಂದದ ಕೌದಿ..! 
ಬಿಸಿಲ ಬೇಗೆಗೆ ತಂಪು, 
ಕೊರೆವ ಚಳಿಗೆ ; ಸುರಿವ 
ಮಳೆಗೆ ಸೊಂಪು..! 
ತಿಳಿದು ನೋಡಲದು 
ಹರಿದ ಚಿಂದಿಗಳ ಗುಂಪು..! 

ಹಬ್ಬ-ಹರಿದಿನಗಳ 
ನೆಪಗಳಲ್ಲಾದರೂ 
ವರುಷದಲ್ಲಿ ನಾಲ್ಕು 
ಬಾರಿಯಾದರೂ 
ತೊಳೆದು ಹಾಕಿದರೆ 
ಬದುಕು ಸೊಗಸು ; 
ಇಲ್ಲವೇ ಹಳಸು..!


                    - ಡಾ.ಯಲ್ಲಮ್ಮ ಕೆ.
                       ತಾವರಗೇರಾ

( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...