ಶನಿವಾರ, ಜುಲೈ 24, 2021

ಗಜಲ್ - ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಮಂಡ್ಯ.

ಗಝಲ್


ನಮ್ಮ ಜೋಡಿ ಬಲು ಅಪರೂಪದ ಕೃಷ್ಣರುಕ್ಮಿಣಿಯಾಗೇ ಜೊತೆಯಾದೆ ನಲ್ಲೆ/

ವನದಲ್ಲಿದ್ದ ನನ್ನ ಒಲವಿಂದ ಸೆಳೆದು ಪ್ರೀತಿಯ ಮಳೆಯಾದೆ ನಲ್ಲೆ//೧//

ಬಾಡಿದ್ದ ಮನಕೆ ಸಸಿಯೊಂದ  ನೆಟ್ಟು ನೀ ಮೊಗ್ಗಾಗಿ ಅಂಕುರಿಸಿದೇಕೆ /
ಕಂಗಳಲಿ ಪ್ರೇಮದ ಬೆಳಕ ಹರಿಸಿ ಬಾಳಿಗೆ ಜ್ಯೋತಿಯಾದೆ ನಲ್ಲೆ//೨//

ನಿನ್ನ ಸಂಪಿಗೆಯಂತ ನಾಸಿಕವು ನಾಚುವ ದಿನಕರನಂತೆ ಕಂಗೊಳಿಸಿ ಕೆಂಪೇರಿದೆ/
ಬಿಸಿಗಾಳಿಗೆ ಮುಂಗುರುಳು ಹಾರಿ  ಹೃದಯಕೆ ತಾಕಿ ಗಿಳಿಯಾದೆ ನಲ್ಲೆ//೩//

ನಿನ್ನ ಅಧರದಲಿ ಸವಿ ಮಕರಂದ ತುಂಬಿ ಸೆಳೆದಿದೆ ದುಂಬಿಯ/
ಚೆಲುವೆ ನನ್ನೊಲವ ಬಾಳದೋಣಿಯಲಿ ನೀ ಅನವರತ ಜೊತೆಯಾದೆ ನಲ್ಲೆ//೪//

ಕಾಲಮೇಘ ಆವರಿಸಿ ಸಾಗರ ಉಕ್ಕಿದರು ಕಡಲಾಷ್ಟು ಅರ್ತಿ ಮುತ್ತಿದೆ/
ರವಿಚಂದ್ರ ಮರೆಯಾದರು ಅಂಜಿಕೆಯ ಬಿಟ್ಟು ಕಟ್ಟೆಯ ಪ್ರಿಯೆಯಾದೆ ನಲ್ಲೆ//೫//


ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...