ಬುಧವಾರ, ಆಗಸ್ಟ್ 4, 2021

ಬದುಕಿನ ಪಯಣ (ಕವಿತೆ) - ಸಹನಾ ಯಶವಂತ್ ಗೌಡ.

 ಬದುಕಿನ ಪಯಣ 
 
ನವ ಜೋಡಿಯಾಗಿ ಬದುಕ ನೆಟ್ಟರು,
ಒಂದೇರಡು ವರುಷ ಕನಸ ಕಟ್ಟಿದರು //೨//
ಪ್ರೀತಿ ವಾತ್ಸಲ್ಯ ಲೆಕ್ಕವಿಲ್ಲದೆ  ಹರಿ ಬಿಟ್ಟರು,
ಬಾಳ ಬಂಡಿಯ ಆಲೋಚನೆಯಲ್ಲಿ ಮುಳುಗಿದರು
//೨//

ಅಂದ ಚೆಂದದ ಸೂರು ಕಟ್ಟಿದರು,
ಭವಿಷ್ಯದ ಕನಸಿಗೆ ಬದುಕಿದರು//೨//
ಆಸೆ ಆಕಾಂಕ್ಷೆಗಳಿಗೆ ಮೂಟೆ ಕಟ್ಟಿದರು,  
ಜೀವನ ಹೋರಾಟಕ್ಕೆ ಬಿಸಿ ರಕ್ತ ಸೂಸಿದರು//೨// 

ಮಕ್ಕಳನ್ನು ಸ್ವಚ್ಛಂದವಾಗಿ ಹಾರಲು ಬಿಟ್ಟರು,
ಎಲ್ಲೊ ಅವಿತ್ತಿದ್ದ ಕನಸ್ಸುಗಳ ಮೆಲುಕು ಹಾಕಿದರು//೨//
ತನ್ನ ಬಿಂಬವ ನೋಡಿ ತಾವೆ ಹೆಮ್ಮೆ ಪಟ್ಟರು,
ತಾನು ಪಟ್ಟ ಕಷ್ಟ ವನ್ನೆಲ್ಲ ಮರೆತು ಸಂತಸದಿನಲಿದರು/೨/

ಮಕ್ಕಳು ಮಾತ್ರ ವೃದ್ಧಾಶ್ರಮವನ್ನೆ ಮೀಸಲಿಟ್ಟರು,
ಕಿಟಕಿಯ ಕಿಂಡಿಯಲ್ಲಿ ನೋಡುತ ಕಣ್ಣಂಚಲಿ ನೀರು ಹರಿಸಿದರು//೨//
ಕಂಡ ಕನಸು ಜೊತೆಗೆ  ಬಾಳ ಪಯಣ ಮುಗಿಸಿ ಮಸಣ ಸೇರಿದರು,
ಒಮ್ಮೆ ಹಿಂತಿರುಗಿ  ಬರುಡು ಬಾಳು ಮುಗಿಸಿದರು//೨//

ಇನ್ನಾದರೂ ಜಾಗೃತರಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು,
ಮಕ್ಕಳಿಗೆ ಬೇಕಿರುವುದು ಮೌಲ್ಯ ಶಿಕ್ಷಣದ ದರಬಾರು//೨//
ಬಾಳ ಪಯಣದಲಿ ಪ್ರೀತಿ ವಾತ್ಸಲ್ಯವೇ  ತೇರು,  
ಸರ್ವ ಸಂಪನ್ಮೂಲ ದೀಕ್ಕರಿಸಿದರೆ ಹೆಚ್ಚು ಕಾಲ ಬಡಿಕಿರುವರು ನಮ್ಮ ಹಿರಿಯರು//೨//

- ಸಹನಾ ಯಶವಂತ್ ಗೌಡ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಮೈಸೂರು .



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...