ಬುಧವಾರ, ಆಗಸ್ಟ್ 4, 2021

ಶಿಕ್ಷಣ (ಕವಿತೆ) - ಅನ್ನಪೂರ್ಣ.ಡಿ.ಸಿಂದೋಗಿ.

 ಶಿಕ್ಷಣ

ಸುಳ್ಳು ಕಪಟ ಮೋಸ ನಂಬಿದವನೆ ಜಾಣ
ಅಂತು ಜೀವನ ಮೌಲ್ಯವ ತಿಳಿಸಿದ ಶಿಕ್ಷಣ
ನಕ್ಕಿದೆ ಸೊಕ್ಕಿಲೆ ತಿರಿಸದೆ ಹಿರಿಯರ ಋಣ
ನೀಡಿದೆ ನ್ಯಾಯ ನೀತಿಯ ಆಚಾರಕೆ ಪಾಷಣ//

ಪಾಂಡಿತ್ಯವು ಮಾಡಿತು ನನ್ನ ಒಂಟಯಾಗಿ
ಆದರು ಖುಷಿಯಿಂದ ನಾಡು ಸುತ್ತಾಡಿ
ಕಳೆದೆ ನಾ ಈ ಜೀವನ ಹಾಯಾಗಿ
ಮೋಹ ದಾಹದ ಮತ್ತಲಿ ತೆಲಾಡಿ //

ಕಲಿತ ಜ್ಞಾನವು ಅತೀ ಆಗಿ
ಅಹಂನಿಂದ ನಂಟು ದೂರ ಮಾಡಿ
ನೊಂದು ಒದ್ದಾಡಿದೆ ಜೀವನ ಹಾಳಾಗಿ
ಮರೆತು ಸಂಸ್ಕಾರದ ನಡೆನುಡಿ//

ಕೊನೆಗೆ ನೆಮ್ಮದಿ ಇಲ್ಲದೆ ಸೊರಗಿ ಕರಗಿ
ಅತ್ತುಬಿಟ್ಟೇ ನಾ ಮನಸ್ಸಿಗೆ ನೋವಾಗಿ
ಕಾರಣ ಅಕ್ಷರ ಜ್ಞಾನವಿಲ್ಲದ ನೇಗಿಲ ಯೋಗಿ
ವಿನಯದಿ ಮೆರೆದ ನಾಡಿಗೆ ಅನ್ನದಾತನಾಗಿ//

ಅರಿತೆ ಅರಳುವದು ಬದುಕು ಹೂವಾಗಿ
ಬದುಕಿದರೆ ಮಾನವ ಸಂಘ ಜೀವಿಯಾಗಿ
ಆ ರೈತ ಕಲಿತವರಿಗೆ ಪ್ರೇರಣೆ ಯಾಗಿ
ಉಳಿದ ಸತ್ಯ ನ್ಯಾಯ ಧರ್ಮದ ಸಂಕೇತವಾಗಿ//

✍️ ಅನ್ನಪೂರ್ಣ.ಡಿ.ಸಿಂದೋಗಿ. ಸಾ!ಭೈರಾಪೂರ,ತಾ!ಜಿ!!ಕೊಪ್ಪಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...