ಶಿಕ್ಷಣ
ಶಿಕ್ಷಣ ಜೀವನ ಮೌಲ್ಯವ ತಿಳಿಸಿ
ನಕ್ಕಿದೆ ಕುಕ್ಕುವ ಜ್ಞಾನವ ಬೆಳೆಸಿ
ಸಂಸ್ಕಾರದ ಆಚಾರ ವಿಚಾರ ಉಳಿಸಿ
ಒಳ್ಳೆಯ ತನುಮನದಿ ಹರಸಿ ಹಾರೈಸಿ//
ಹಳೆದು ಹೊಸದು ಕಳೆದು
ಅಳಿದು ಉಳಿದು ತಿಳಿದು
ಬಾಳಿದೆ ಬೆಳೆದೆ ನಲಿದು//
ನಾನು ನೀನು ಮರೆತೆ
ನಾವು ನೀವು ಕಲಿತೆ
ಎಲ್ಲರೂ ಒಂದೇ ಎನುತೆ//
ಜೀವನ ಭಾವನ ನಂದನ
ಗಾಯನ ಚಿಂತನ ನವಿನ
ತಿಳಿಸಿತು ಗುರುವಿನ ಭವನ//
ಜೊತೆಗೆ ಶಿಕ್ಷಣ ತುಸು ಅಹಂ ತರಿಸಿ
ಬಂಧು ಬಳಗ ದೂರವೆ ಇರಿಸಿ
ಒಂಟಿತನವೆ ಸುಂದರ ಎನಿಸಿ
ಮೆರೆಯುತ್ತಿದೆ ಶಿಕ್ಷಣ ಸತ್ಯ ನ್ಯಾಯ ಧರ್ಮವ ಮರೆಸಿ//
- ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!ಭೈರಾಪೂರ, ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ