ಅಪ್ಪಟ ಅಡಿಕೆಯ ಕಂಪು,
ಹಳ್ಳಿಯ ಗದ್ದೆ ಬಯಲಿನ ತೋಟದ ಕಟ್ಟೆಯಿಂದ-ಅಂತರಾಷ್ಟ್ರೀಯ ಮಾರುಕಟ್ಟೆಯತನಕ ಹಬ್ಬಿಸಿಕೊಂಡಿದೆ ತನ್ನ ಛಾಪು...
ಅಡಿಕೆಯು ಮೊಳಕೆಯೊಡೆದು ಸಸಿಯಾಗಿ ಆಕಾಶದೆತ್ತರಕ್ಕೆ ಹೆಮ್ಮರವಾಗಿ ಬೆಳೆದ ಮೇಲೆ ತಲೆ ಎತ್ತಿ ನೋಡಬೇಕು ಎತ್ತರ ಎತ್ತರ,
ಅಡಿಕೆ ಸಸಿಯ ಬೆಳೆಸುವಲ್ಲಿ ರೈತನ ಬೆವರಿನ ಶ್ರಮ ಅಪಾರ,
೫-೬ ವರ್ಷಗಳಲ್ಲಿ ಅಡಿಕೆ ಎಂಬ ಫಲ ನೀಡಿ ಹಲವರ ಬದುಕಿಗೆ ಬೆಳಕ ನೀಡುವ ವಿಚಾರ-ನಿರಂತರ,
ನಮ್ಕಡೆ ಅಡಿಕೆ ತೋಟವೆಂದು ಎಲ್ಲೆಲ್ಲೂ ಪ್ರಚಾರ..
ಅಡಿಕೆ ಹಾಳೆಯಿಂದ ಮನೆಯ ಸಾರಿಸುವುದು ಮರೆಯಾಗಿದೆ ಎಂದರೆ ನೀವು ನಂಬುವವರೇ,
ವಾವ್ಹ್ ಅದ್ಭುತ!
ತಲೆಗೆ ತಂಪು ನೀಡುವ ಅಡಿಕೆ ಹಾಳೆ ಟೊಪ್ಪಿ ಮಾಡುವವರೂ ಕ್ರಮೇಣ ಮರೆ-ಹಾಕಿಕೊಳ್ಳುವವರೂ ಕಣ್ಮರೆ,
ಅಡಿಕೆ ಹಾಳೆಗಳು ಹಲವರಿಗೆ ಊಟದ ತಟ್ಚೆ-ಲೋಟ,ಹಾಳೆಯ ಕ್ರಾಪ್ಟ್ ಮಾಡುವಲ್ಲಿ ಉದ್ಯೋಗ ಸೃಷ್ಟಿಸಿ ದುಡಿಯುವ ಕೈಗಳಿಗೆ ನೀಡಿವೆ ಆಸರೆ..
ಬೀಸುವ ತಂಗಾಳಿಗೆ ತಲೆದೂಗಿ ಓಲಾಡುತಿರು ಅಡಿಕೆಯ ಹಚ್ಚ-ಹಸಿರ ಹೆಡೆಗಳೇ ಸುಂದರ,
ಅಡಿಕೆ ಮರದ ಸಿಂಗಾರವೇ ದೇವರಿಗೆ ಮುಡಿಯುವ ಬಂಗಾರ,
ಅವೆಷ್ಟೋ ಜನರಿಗೆ ಉದ್ಯೋಗ ನೀಡಿ ಜೀವನಕ್ಕೆ ದಾರಿದೀಪವಾಗಿರುವುದೇ ಅದ್ಭುತ ವಿಚಾರ....
ಅಡಿಕೆಯ ಮರಕೆ ಸ್ಪರ್ಷದ ಅಪ್ಪುಗೆಯ ನೀಡುವ ಅಂಬಾಡಿ-ತಾಂಬೂಲದೆಲೆ,
ಕಪ್ಪುಬಂಗಾರವೆಂದು ಖ್ಯಾತಿ ಪಡೆದ ಕಾಳುಮೆಣಸಿನ ಆಲಿಂಗನದ ಪ್ರೀತಿಯ ಸೆಲೆ,
ಕಣ್ತುಂಬಿಕೊಳ್ಳುವ ನಾವೇ ಭಲೇ-ಭಲೇ....
ಅಡಿಕೆ ಕೊಯ್ಲಿನ ಕೊನೆಗೌಡ್ರು ಬಲು ಧೈರ್ಯವಂತ,
ಎಲ್ಲರಿಗೂ ನೀಡುವನು ಸಾಥ್,
ಹಳ್ಳಿ ಸೊಗಡಿನ ಪ್ರದೇಶದಲ್ಲಿ
ಅವನೇ ಡಿಮ್ಯಾಂಡ್ನಲ್ಲಿರೋ ಈ ಭುವಿಯ ಸಂಜಾತ-ಹಲವರಿಗೆ ಉದ್ಯೋಗದಾತ,
ಅಡಿಕೆ ಗೊನೆಗಳಿಗೆ ಔಷಧಿ ಸಿಂಪಡಿಸುವಿಕೆ/ಕೊಟ್ಟೆ ಕಟ್ಟುವಿಕೆ-ಅಡಿಕೆಯ ಕೊಯ್ಯುವಿಕೆ ಸುಲಿಯುವಿಕೆ ಒಣಗಿಸುವಿಕೆ,
ಬೇರೆ-ಬೇರೆ ಪಡಿಯಾಗಿ
(ಅಡಿಕೆಯ ವರ್ಗೀಕರಣ) ಬೇರ್ಪಡಿಸುವಲ್ಲಿ ಬಹಳ ಉತ್ಸುಕತೆ..
ಹಳ್ಳಿ ಕಟ್ಟೆಯಲ್ಲಿನ ಅಡಿಕೆಯ ಚೀಲಗಳು ಹತ್ತಿರದ ಮಾರುಕಟ್ಟೆಯಿಂದ ಅಂತರಾಷ್ಟೀಯ ಮಾರುಕಟ್ಟೆಯವರೆಗೆ ಸಾಗಾಟ,
ಉತ್ತಮವಾದ ಬೆಂಬಲ ಬೆಲೆಗೆ (ರೇಟಿಗೆ)ಅಡಿಕೆಯ ಮಾರಾಟ,
ಗುಟ್ಕಾ & ಪಾನ್ ಸುಪಾರಿ,ಪಾನ್ಮಸಾಲಾ ಚಾಕೋಲೇಟ್ ಇತ್ಯಾದಿಯಾಗಿ ಪರಿವರ್ತನೆ ಪಡೆದು ದೇಶಿ-ವಿದೇಶಿ ವ್ಯಾಪಾರಿ ಮಾರ್ಕೇಟ್ ಗಳಲ್ಲಿ ತುಂಬಾ ಶ್ರೇಷ್ಠ,
ಜನರು ಅವುಗಳ ಖರೀದಿಗೆ ಆಡುವರು ಆಟ-ಕಾದಾಟ-ಏನೋ ಹುಡುಗಾಟ...
ಹಣದ ಆಗಮನ,
ಎಲ್ಲದರ ಹಿಂದೆ ರೈತನ ಬೆವರಿನ ಹನಿಯ ದಾನ,
ಬದುಕಿಗೆ ಭರವಸೆಯು- ನೆಮ್ಮದಿಯ ಸುಖ ಜೀವನ,
ಇದು ನಮ್ಮ ಹಳ್ಳಿಯ ಬದುಕಿನ ನಿರಂತರ ಯಾನ...
ಇಂತಹ ಭುವಿಯ ಸೃಷ್ಟಿಯ ಸೃಷ್ಟಿಕರ್ತನಿಗೆ ನಿತ್ಯವೂ ಸಲ್ಲಿಸುತ್ತಿರುವೆವು ನಮನ...
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ