ಶುಕ್ರವಾರ, ಅಕ್ಟೋಬರ್ 29, 2021

ಅಪ್ಪುಗೆ ಬರವಣಿಗೆಯ ಅಪ್ಪುಗೆ (ಕವಿತೆ) - ಬಿ.ಕುಬೇರಪ್ಪ (ಮುತ್ತುಕಂದ), ಕೆ.ಸೂಗೂರು, ಜಿ-ಬಳ್ಳಾರಿ.

ನಿನ್ನ ಸಾವು ನಂಬಲಸಾಧ್ಯ ಅಪ್ಪು,
ನಮ್ಮಿಂದ ಅಗಲಿಸಿದ್ದು ದೇವರ ತಪ್ಪು,

ನೀನು ಸದಾ ನಗುಮೊಗದ ಅರಸು, 
ನವ ಯುವಕರ ಪಾಲಿನ ಯುವರತ್ನ,
ನಾಡು ಮೆಚ್ಚಿದ ನಟ ಸಾರ್ವಭೌಮ,
ಅಭಿಮಾನಿಗಳಿಗೆ ಅಣ್ಣಾ ಬಾಂಡ್.

ಅಪ್ಪನಂತೆ ಬಾಳಿದ ಸರಳತೆಯ ವಂಶಿ,
ದಟ್ಟವಾಗಿ ಬೆಳೆದ ಬೆಟ್ಟದ ಹೂವು,
ಸೋಲೇ ಕಾಣದಿರುವ ವೀರ ಕನ್ನಡಿಗ,
ಜನಕ ಪರಂಪರೆಯ ಕನ್ನಡದ ಜಾಕಿ.

ಅನಾಥರ ಕೈ ಹಿಡಿದ ಅಂಜನಿಪುತ್ರ,
ಜನ್ಮ ಸಾರ್ಥಕತೆಯ ನಮ್ಮ ಬಸವ, 
ಅದ್ಭುತ ನೃತ್ಯ, ಗಾಯನದ ಮಿಲನ,
ಮಕ್ಕಳ ಶಿಕ್ಷಣಕ್ಕನುವಾದ ರಣವಿಕ್ರಮ.

ವೃದ್ಧರಿಗೆ ದೈರ್ಯ ತುಂಬಿದ ಮೌರ್ಯ,
ಬಡಿವಾರವೇ ತೋರದ ಪರಮಾತ್ಮ,
ನಂಬಿದವರಿಗೆ ಬೆನ್ನು ತಿಟ್ಟಿದ ಮೈತ್ರಿ,
ಕೋಟ್ಯಾಧಿಪತಿ ನಡೆಸಿದ ಅಜಯ್.

ಬಾಲ ನಟನೆಯಲ್ಲಿ ಸೈ ಭಕ್ತಪ್ರಹ್ಲಾದ,
ನಿನ್ನಿಂದಲೇ ಗೋಮಾತೆಗಿಷ್ಟು ಆಶ್ರಯ,
ನಿನ್ನಗಲಿಕೆಗೆ ಆತ್ಮಗಳು ಬಲು ನೊಂದಿವೆ,
ಮತ್ತೆ ಹುಟ್ಟಿ ಬಾ ಪುನಿತ್ ಕಂಗಳು ಕಂದಿವೆ.

- ಬಿ.ಕುಬೇರಪ್ಪ(ಮುತ್ತುಕಂದ), ಕೆ.ಸೂಗೂರು, ಜಿ-ಬಳ್ಳಾರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...